ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ತಮ್ಮ ವೃತ್ತಿ ಜೀವನದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಗೌತಮ್ ಗಂಭೀರ್ ಅವರು ರವಿಶಾಸ್ತ್ರಿ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಈ ವರ್ಷ ಯಾವುದೇ ಟೆಸ್ಟ್ ಟೂರ್ನಿಯನ್ನು ಗೆದ್ದಿಲ್ಲ. ಆದ್ರೂ ಕೋಚ್ ತಮ್ಮ ತಂಡ ಈ ಹಿಂದಿನ ತಂಡಗಳಿಗಿಂತಲೂ ಉತ್ತಮ ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ರವಿಶಾಸ್ತ್ರಿ ಬಗ್ಗೆ ಮಾತನಾಡಲು ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಅಲ್ಲದೇ ತಂಡದ ಕೋಚ್ ಆಗಿಯೂ ಅವರ ಸಾಧನೆ ಕಳಪೆ ಆಗಿದೆ ಎಂದರು.
- Advertisement 2
- Advertisement 3
ಇದೇ ವೇಳೆ ತಂಡದ ಸಾಧನೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಾತ್ರ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ತಂಡದಲ್ಲಿ ರಹಾನೆ, ಪೂಜಾರ, ರೋಹಿತ ಶರ್ಮಾ ರಂತಹ ಆಟಗಾರರಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದರೆ ಅದು ತಂಡಕ್ಕೆ ಅಪಾಯಕಾರಿಯಾದ ಬೆಳವಣಿಗೆ. ಇದು ಇತರೆ ಆಟಗಾರರ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ಯಾವುದೇ ಒಬ್ಬ ಆಟಗಾರನ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಅಷ್ಟೇ ಮುಖ್ಯ ಎಂದು ಸ್ಪಷ್ಟಪಡಿಸಿದರು.
- Advertisement 4
ಇದೇ ವೇಳೆ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮವಾಗಿತ್ತು. ಅವರು ತಮ್ಮ ವೃತ್ತಿಗೆ ನೀಡುವ ಪ್ರಮುಖ್ಯತೆ ನಾನು ಬೇರೆ ಯಾವ ಆಟಗಾರರಲ್ಲೂ ನೋಡಿಲ್ಲ. ಆದರೆ ಅವರು ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು ಅಸಮಾಧಾನವಿದೆ. ಬಿಸಿಸಿಐ ಕೂಡ ಅವರ ರಾಜೀನಾಮೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ತಿಳಿಸಿದರು.
ಟೀಂ ಇಂಡಿಯಾಗೆ ಆಸೀಸ್ ಟೂರ್ನಿ ವಿದೇಶದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಉತ್ತಮ ಅವಕಾಶ ಪಡೆದಿದೆ ಎಂದು ಗಂಭೀರ್ ವೃತ್ತಿ ಬದುಕಿನ ವಿದಾಯ ಬಳಿಕ ಮುಂದಿನ ದಿನಗಳಲ್ಲಿ ತಂಡದ ಮೆಂಟರ್ ಆಗುವ ಉದ್ದೇಶವೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv