Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!

Public TV
Last updated: December 18, 2018 11:17 am
Public TV
Share
4 Min Read
VIP
SHARE

– ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

VIP 3
ಜನಪ್ರತಿನಿಧಿಗಳ ಮನೆಗಳಲ್ಲಿ ಕಸ ವಿಲೇವಾರಿ ಆಗುತ್ತಿದ್ಯಾ? ಅಥವಾ ಇಲ್ವಾ….? ಅಂತ ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.

VIP 5

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರ ನಿವಾಸದ ಬಳಿಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ತೆರಳಿದಾಗ ಅಲ್ಲಿಯ ದೃಶ್ಯ ಕಂಡು ನಿಜಕ್ಕೂ ಆಘಾತವುಂಟಾಗಿದೆ. ಯಾಕಂದ್ರೆ, ನಾಡಿನ ಅಧಿಪತಿ ನಿವಾಸದಲ್ಲೇ ಕಸ ವಿಲೇವಾರಿ ಆಗುತ್ತಿಲ್ಲ.
ಪಬ್ಲಿಕ್ ಪ್ರತಿನಿಧಿ – ನೀವೇ ಮಾಡಿಕೊಳ್ಳಬೇಕಾ?
ಪೌರ ಕಾರ್ಮಿಕ – ಹು…..
ಪ್ರತಿನಿಧಿ – ಅವರು ಮಾಡಿಕೊಡಲ್ವಾ…?
ಪೌರ ಕಾರ್ಮಿಕ – ಇಲ್ಲ. ಅವರ್ಯಾಕೆ ಮಾಡಿಕೊಡಬೇಕು?
ಪ್ರತಿನಿಧಿ – ಹಸಿ, ಒಣ ಕಸ ಬೇರೆ ಮಾಡಿಕೊಡಬೇಕು ಅಲ್ವಾ…?
ಪೌರ ಕಾರ್ಮಿಕ – ನಮ್ ಕೆಲಸ ಅದು ಮಾಡ್ತೀವಿ.

ಮುಖ್ಯಮಂತ್ರಿಗಳ ಮನೆಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಬೆಂಗಳೂರು ಉಸ್ತುವಾರಿ ಸಚಿವರು ಅಂತ ಅನಿಸಿಕೊಂಡ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆಯಲ್ಲಿ ಏನಾದರೂ ಕಸ ವಿಲೇವಾರಿ ಆಗುತ್ತಿದ್ಯಾ…? ಅಂತ ನೋಡಲು ಹೊರಟ್ರೆ ಅಲ್ಲೂ ಕಸ ವಿಲೇವಾರಿ ಆಗುತ್ತಿರಲಿಲ್ಲ.

VIP 2

ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಗರಾಭಿವೃದ್ಧಿ ಸಚಿವರಾದ ಬೆರಳೆಣಿಕೆಯ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಸಿ ಕಸ ಬೇರ್ಪಡಿಸಿ ಎಂದು ಸಂದೇಶ ನೀಡಿದ್ರು. ಆದ್ರೆ ಅವರು ವಾಸವಿರೋ ಸದಾಶಿವನಗರ ಮನೆಯಲ್ಲೇ ಕಸ ವಿಂಗಡನೆಯೇ ಆಗುತ್ತಿಲ್ಲ. ಕಡೆ ಪಕ್ಷ ಕಸವನ್ನ ತಂದು ಪೌರಕಾರ್ಮಿಕರ ಕೈಗೂ ಕೊಡಲ್ಲ. ಬದಲಾಗಿ ಅವರ ಮನೆ ಡೆಸ್ಟ್ ಬಿನ್ ತಂದು ಕಸ ಸುರಿದುಕೊಂಡು ಹೋಗ್ತಾರೆ.
ಪ್ರತಿನಿಧಿ – ಎಲ್ಲ ರಾಜಕಾರಣಿಗಳು ಇರೋದು ಇಲ್ಲೇ ತಾನೇ?
ಪೌರಕಾರ್ಮಿಕ – ಹೌದು.
ಪ್ರತಿನಿಧಿ – ಕಸ ಬೇರ್ಪಡಿಸಿ ಕೊಡ್ತಾರಾ…?
ಪೌರಕಾರ್ಮಿಕ – ಇಲ್ಲ
ಪ್ರತಿನಿಧಿ – ಯಾಕೆ ಅಂತ ಕೇಳೋದು…?
ಪೌರಕಾರ್ಮಿಕ – ನಿಮ್ ಕೆಲಸನೇ ಅದು. ಮಾಡಿದರೆ ಮಾಡಿ ಇಲ್ಲ ಬಿಡಿ ಅಂತಾರೆ. ನಮ್ ಕಷ್ಟ ಕೇಳೋರು ಯಾರು?
ಪ್ರತಿನಿಧಿ – ಡಿಸಿಎಂ ಮನೆಯಲ್ಲಿ ಕಸ ಬೇರ್ಪಡಿಸ್ತಾರಾ?
ಪೌರಕಾರ್ಮಿಕ – ಅವರೂ ಅಷ್ಟೇ.. ಕಸ ವಿಂಗಡಿಸಿಲ್ಲ

VIP 6

ಸಿಎಂ, ಡಿಸಿಎಂ ಆಯ್ತು. ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಏನಾಗ್ತಿದೆ ಅಂತ ಪದ್ಮನಾಭನಗರ ಕಡೆ ಹೊರಟ್ರೆ ಅಲ್ಲೂ ಕಂಡುಬಂದಿದ್ದು ಮಾಮೂಲಿ ಚಿತ್ರಣವೇ.
ಪ್ರತಿನಿಧಿ – ದೇವೇಗೌಡರ ಕಸ ವಿಂಗಡಿಸಿ ಕೊಡ್ತಾರಾ ?
ಪೌರಕಾರ್ಮಿಕ – ಯಾರ್ ಮನೆಯವ್ರು…?
ಪ್ರತಿನಿಧಿ – ಗೌಡರ ಮನೆಯವ್ರು…?
ಪೌರಕಾರ್ಮಿಕ – ಇಲ್ಲ. ಒಬ್ರು ಮಾಡ್ತಾರೆ. ಇನ್ನೊಬ್ಬರು ಮಾಡಲ್ಲ.

VIP 7

ಗೌಡರ ನಿವಾಸದಲ್ಲೂ ಕಸ ವಿಲೇವಾರಿ ಆಗುತ್ತಿಲ್ಲ. ಬಳಿಕ ಅಲ್ಲಿಂದ ನೇರವಾಗಿ ಜಯಮಾಲಾ ಮನೆ ನೋಡಿ ಬಿಡೋಣ ಅಂತ ಡಾಲರ್ಸ್ ಕಾಲೋನಿಯತ್ತ ಹೊರಟ್ವಿ. ಸಚಿವೆ ಆಗಿರುವುದಕ್ಕಿಂತ ಗೃಹಿಣಿ ಆಗಿರೋದ್ರಿಂದ ನಮ್ಮ ನಿರೀಕ್ಷೆಗಳೂ ಹೆಚ್ಚಿದ್ವು. ಆದ್ರೆ ಆಗಿದ್ದೇ ಬೇರೆ. ಏನಂದ್ರೆ ಸಚಿವೆಯ ಮನೆಯಲ್ಲೂ ಕಸ ವಿಂಗಡಣೆಯೇ ಇಲ್ಲ.
ಪ್ರತಿನಿಧಿ – ಮಿನಿಸ್ಟರ್ ಮನೆಯಲ್ಲಿ ಕಸ ವಿಂಗಡಿಸಲ್ವಂತೆ ?
ಪೌರಕಾರ್ಮಿಕ – ಹೌದು. ಇಲ್ಲಿ ಒಬ್ಬರ ಮನೆ ಇದೆ .. ಜಯಮಾಲಾ ಮನೆ, ವಿಂಗಡಿಸ್ತಾರೆ.. ಆದ್ರೆ ಮಿಕ್ಸ್ ಮಾಡಿ ಹಾಕುತ್ತಾರೆ. ನಾವೇ ಕ್ಲೀನ್ ಮಾಡಬೇಕು.
ಪ್ರತಿನಿಧಿ – ಹು..
ಪೌರಕಾರ್ಮಿಕ – ಮೇಡಂ ನೋಡಿದ್ರೆ ಬೈಯ್ತಾರೆ.. ಆದ್ರೆ ಇದೆಲ್ಲಾ ಕೆಲಸಗಾರರ ಅವಾಂತರ

VIP 4 Copy

ಪೌರಕಾರ್ಮಿಕ- ಯಾಕೆ ಕಸ ಸಪರೇಟ್ ಮಾಡಿ ಕೊಡ್ತಾ ಇಲ್ಲ
ಮಂತ್ರಿ ಮನೆ ಕೆಲಸದಾಕೆ – ಗೊತ್ತಿಲ್ಲ ನನಗೆ.
ಪ್ರತಿನಿಧಿ – ಯಾಕೆ ಮಾಡ್ತಾ ಇಲ್ಲ?
ಮಂತ್ರಿ ಮನೆ ಕೆಲಸದಾಕೆ – ನನಗೆ ಗೊತ್ತಿಲ್ಲ, ಕಸ ಗುಡಿಸೋರು ಬೇರೆ? ಕ್ಲೀನ್ ಮಾಡೋರು ಬೇರೆ .. ಇನ್ನೊಬ್ರು ಕೇಳಿ ಗೊತ್ತಿಲ್ಲ..
ಪೌರಕಾರ್ಮಿಕ – ಅವತ್ತೇ ಹಿಗ್ ಮಾಡ್ ಬಾರದು ಅಂತ ಹೇಳಿಲ್ವಾ…?
ಪೌರಕಾರ್ಮಿಕ – ಬಕೆಟ್ ನಲ್ಲಿ ಪ್ಲಾಸ್ಟಿಕ್ , ಬಾಟೆಲ್ ಎಲ್ಲ ಸರ್ಪೆಟ್ ಮಾಡಿ, ಇಲ್ಲವಾದ್ರೆ ಮೇಡಂಗೆ ಹೇಳ್ತಿವಿ.. ಎಲ್ಲರೂ ಕಂಪ್ಲೇಂಟ್ ಮಾಡ್ತಾರೆ
ಮಂತ್ರಿ ಮನೆ ಕೆಲಸದಾಕೆ – ಆಯ್ತು ಇನ್ಮುಂದೆ ಮಾಡ್ತಿನಿ

VIP 10

ಆಡಳಿತ ಮೈತ್ರಿ ಪಕ್ಷದ ನಾಯಕರನ್ನ ಕಥೆ ಈ ರೀತಿಯಾಗಿತ್ತು. ಈಗ ಇದೆಲ್ಲ ಸರಿನಾ ಅಂತ ಕೇಳಬೇಕಾದ ವಿರೋಧ ಪಕ್ಷದ ನಾಯಕರ ಮನೆ ಬಳೀ ಹೋದ್ರೆ ಅವರದ್ದು ಇದೇ ಕಥೆ. ಡಾಲರ್ಸ್ ಕಾಲೋನಿಯಲ್ಲಿರೊ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲೂ ಕಸ ವಿಂಗಡನೆ ಮಾಡಲ್ಲ.
ಪೌರಕಾರ್ಮಿಕ – ಎರಡು ಮನೆ ಕ್ಲಿನ್ ಮಾಡಿ ಕೊಡ್ತಾರೆ.. ಉಳಿದ ಇಬ್ರು ಹಾಗೇ ಕೊಡ್ತಾರೆ
ಪ್ರತಿನಿಧಿ – ಯಡಿಯೂರಪ್ಪ ಪಿಎ ಗಾದ್ರೂ ಹೇಳಬೇಕಿತ್ತು.
ಪೌರಕಾರ್ಮಿಕ – ಅವರೆಲ್ಲ ನಮ್ ಹತ್ರ ಎಲ್ಲಿ ಮಾತಾಡ್ತಾರೆ. ಬರ್ತಾರೆ. ಹೋಗ್ತಾರೆ.
ಪ್ರತಿನಿಧಿ – ಯಾರಿಗಾದ್ರೂ ಹೇಳಿದ್ರಾ?
ಪೌರಕಾರ್ಮಿಕ – ಯಾರಿಗೂ ಹೇಳಿಲ್ಲ.. ನಾವೇ ಮಾಡಿ ಕೊಳ್ತಿವಿ

VIP 9

ಒಟ್ಟಿನಲ್ಲಿ ಬಾಯಿಯಲ್ಲಿ ಹೇಳೋದು ಸುಲಭ. ಮಾಡೊದು ಕಷ್ಟ. ಶ್ರೀಸಾಮಾನ್ಯರು ಕಸ ವಿಂಗಡಣೆ ಮಾಡದಿದ್ದರೆ ದಂಡ ವಿಧಿಸೋ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಕೇಳಿದ್ರೆ, ಕೊಡೋ ಉತ್ತರನೇ ಬೇರೆಯದ್ದಾಗಿರುತ್ತದೆ.

https://www.youtube.com/watch?v=bJyc-Nl-fEI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Facebook Whatsapp Whatsapp Telegram
Previous Article mnd death protest collage copy ಟವರ್ ಏರಿ ಅಣ್ಣನ ಮೃತದೇಹಕ್ಕಾಗಿ ಗೋಗರೆಯುತ್ತಿರುವ ತಮ್ಮ!
Next Article aus win 1 ಮೂರು ರನ್ ಅಂತರದಲ್ಲಿ 4 ವಿಕೆಟ್ ಪತನ – 146 ರನ್‍ಗಳಿದ್ದ ಗೆದ್ದ ಆಸ್ಟ್ರೇಲಿಯಾ

Latest Cinema News

Jyoti Rai
ಪಡ್ಡೆಗಳ ನಿದ್ದೆ ಕದ್ದ ಹಾಟ್ ಬ್ಯೂಟಿ ಜ್ಯೋತಿ ರೈ – ಕಾಮೆಂಟ್ಸ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ?
Cinema Latest Sandalwood
Sudharani 2
BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?
Cinema Latest Sandalwood Top Stories TV Shows
Krrish 4
ಹೃತಿಕ್ ನಟನೆಯ ಜೊತೆಗೆ ನಿರ್ದೇಶನ ಕ್ರಿಶ್-4 ಹೇಗಿರಲಿದೆ ಗೊತ್ತಾ..?
Bollywood Cinema Latest Top Stories
Disha Patani Emraan Hashmi 1
ಸೂಪರ್ ಹಿಟ್ ಅವರಾಪನ್ ಚಿತ್ರದ ಸಿಕ್ವೇಲ್ – ಇಮ್ರಾನ್ ಹಶ್ಮಿಗೆ ದಿಶಾ ಪಟಾನಿ ನಾಯಕಿ
Bollywood Cinema Latest Top Stories
Darshan Rajavardhan
ವಿಷ ಕೇಳಿದ ನಟ ದರ್ಶನ್ ಬಗ್ಗೆ ಆಪ್ತ ರಾಜವರ್ಧನ್ ಮರುಕ
Cinema Latest Sandalwood Top Stories

You Might Also Like

daily horoscope dina bhavishya
Astrology

ದಿನ ಭವಿಷ್ಯ 10-09-2025

5 minutes ago
Nepal
Bengaluru City

ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

7 hours ago
Bengaluru 1
Bengaluru City

ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್‌ – ಕಟ್ಟಡ ನಿರ್ಮಾಣಕ್ಕೆ ಓಸಿಯಿಂದ ವಿನಾಯ್ತಿ

8 hours ago
Karwar Satish Sail Home ED Raid
Districts

ಅಕ್ರಮ ಹಣ ವರ್ಗಾವಣೆ ಕೇಸ್‌ – ಇ.ಡಿಯಿಂದ ಶಾಸಕ ಸತೀಶ್ ಸೈಲ್‌ ಅರೆಸ್ಟ್‌

9 hours ago
CP Radhakrishnan Narendra Modi
Latest

ದೇಶದ ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ ಯಾರು? ಹಿನ್ನೆಲೆ ಏನು?

9 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?