ಫೋಟೋ ಮುಂದೆ ಉಪ್ಪಿನ ಪ್ಯಾಕೆಟ್ ಇಟ್ಟು ಗಾಂಧಿ ಜಯಂತಿ ಆಚರಣೆ

Public TV
1 Min Read
WATAL NAGARJ

-ಸಾರ್ವಜನಿಕರಿಗೆ ಉಪ್ಪಿನ ಪ್ಯಾಕೆಟ್ ಹಂಚಿಕೆ

ಬೆಂಗಳೂರು: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಫೋಟೋಗೆ ಪುಷ್ಪ ನಮನ ಹಾಗೂ ಉಪ್ಪಿನ ಪ್ಯಾಕೆಟ್‍ಗಳನ್ನು ಇಟ್ಟು ವಿನೂತನವಾಗಿ ಗಾಂಧೀಜಿ ಹುಟ್ಟು ಹಬ್ಬವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಚರಿಸಿದ್ದಾರೆ.

WATAL NAGRAJ

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಉಪ್ಪಿನ ಪ್ಯಾಕೆಟ್ ಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಗಾಂಧೀಜಿ ಅವರನ್ನು ವಾಟಾಳ್ ನಾಗರಾಜ್ ನೆನೆದರು. ಇದನ್ನೂ ಓದಿ: ನನ್ನನ್ನು ಸೋಲಿಸಿದ್ದು ಮೋದಿ, ಶಾ, ಆರ್‌ಎಸ್‌ಎಸ್‌: ಖರ್ಗೆ

WATAL NAGRAJ 1

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ದೇಶದಲ್ಲಿ ರಾಜಕೀಯ ನಾಯಕರು ಹದಗೆಟ್ಟು ಹೋಗಿದ್ದಾರೆ. ರಾಜಕೀಯ ನಾಯಕರಾದ ಸಿಎಂ, ಮಂತ್ರಿಗಳು, ಹಾಗೂ ಎಂಎಲ್‍ಎ ಹಾಗೂ ಎಂಪಿ ಗಳನ್ನು ಹರಾಜು ಮೂಲಕ ಪಡೆದುಕೊಳ್ಳಬಹುದು. ದೇಶದ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆ ಕಡಿಮೆ ಆಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಜೀವನ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದು ಟೀಕಿಸಿದರು.

WATAL NAGRAJ 2

ಇದೆ ವೇಳೆ ಕೆಲವು ಸಾರ್ವಜನಿಕರು ವಾಟಾಳ್ ನಾಗರಾಜ್ ರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟರೆ, ಇನ್ನೂ ಕೆಲವರು ಉಪ್ಪಿನ ಪ್ಯಾಕೆಟ್ ಪಡೆದು ವಾಟಾಳ್ ನಾಗರಾಜ್‍ರಿಂದ ಆಶೀರ್ವಾದ ಪಡೆದು ಖುಷಿ ಪಟ್ಟರು. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

Share This Article
Leave a Comment

Leave a Reply

Your email address will not be published. Required fields are marked *