ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಡಾಕ್ಯುಮೆಂಟರಿ ಮಾದರಿಯ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಗಂಧದ ಗುಡಿಯಲ್ಲಿ ಏನೆಲ್ಲ ವಿಶೇಷಗಳಿವೆ, ಅಪ್ಪು ಯಾವ ರೀತಿ ಕಾಣಿಸಿಕೊಂಡಿದ್ದಾರೆ. ಅವರು ಅದಕ್ಕಾಗಿ ಹೇಗೆ ಶ್ರಮ ಪಟ್ಟಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಈ ಕುತೂಹಲಕ್ಕೆ ಸಣ್ಣ ಬ್ರೇಕ್ ಹಾಕುವಂತೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ನಡೆಸಿದ ಸಂದರ್ಶನದಲ್ಲಿ ಮೊದಲ ಬಾರಿಗೆ ಅವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಅಲ್ಲದೇ, ಸ್ವತಃ ಅಶ್ವಿನಿ ಅವರು ಕೂಡ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಅಲ್ಲದೇ, ಪುನೀತ್ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರಿಗೂ ಅವರು ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಬಂದಿರುವ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ.
ಗಂಧದ ಗುಡಿಗೆ ಯಾವುದೇ ರೀತಿಯಲ್ಲಿ ಸ್ಕ್ರಿಪ್ಟ್ ಇರಲಿಲ್ಲ. ಅಪ್ಪು ಹೀಗೆ ಕಾಣಿಸಬೇಕು, ಹಾಗೆ ಇರಬೇಕು ಎನ್ನುವ ಚರ್ಚೆ ಕೂಡ ಮಾಡಿರಲಿಲ್ಲವಂತೆ. ಕರ್ನಾಟಕವನ್ನು ತಾವು ಕಂಡಂತೆ, ಕನಸು ಕಾಣುವಂತೆ ತೋರಿಸಬೇಕು ಎನ್ನುವುದು ಪುನೀತ್ ಅವರ ಆಸೆ ಆಗಿತ್ತಂತೆ. ಹಾಗಾಗಿ ಅವರ ನೋಟದಲ್ಲಿ ಕರ್ನಾಟಕ ಹೇಗೆ ಮೂಡಿ ಬಂದಿದೆ ಎನ್ನುವುದೇ ಗಂಧದ ಗುಡಿ ವಿಶೇಷ ಅಂದಿದ್ದಾರೆ ಅಶ್ವಿನಿ. ಅಲ್ಲದೇ ಇದರಲ್ಲಿ ಅಪ್ಪು ಯಾವುದೇ ಕಾರಣಕ್ಕೂ ಮೇಕಪ್ ಹಾಕಲಿಲ್ಲವಂತೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
ಕಾಳಿ ನದಿ ಟ್ರೆಕ್ಕಿಂಗ್ ಗೆ ಹೋದಾಗ ಅಪ್ಪು ಕಾಲ್ ಮಾಡಿ, ನೀನು ಇಲ್ಲಿಗೆ ಬರಬೇಕು ಎಂದು ಅಶ್ವಿನಿ ಅವರಿಗೆ ಹೇಳಿದ್ದರಂತೆ. ಈ ಕಾಲ್ ಮಾಡಲು ಅವರು ಬೆಟ್ಟ ಏರಬೇಕಾಗಿತ್ತು ಎನ್ನುವ ಪ್ರಸಂಗವನ್ನೂ ನೆನಪಿಸಿಕೊಂಡಿದ್ದಾರೆ. ಕಾಳಿ ನದಿ ಟ್ರೆಕಿಂಗ್, ಟೈಗರ್ ರಿಸರ್ವ್ ಪಾಯಿಂಟ್ ಸೇರಿದಂತೆ ಹಲವು ಸ್ಥಳಗಳಲ್ಲಿ ಪುನೀತ್ ಅವರ ಜೊತೆ ಅಶ್ವಿನಿ ಕೂಡ ಹೋಗಿದ್ದರಂತೆ. ಕಾಳಿ ನದಿ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಗಾಜನೂರು, ನಾಗರಹೊಳೆ, ಮುರಡೇಶ್ವರ ನೇತ್ರಾಣಿ ನದಿ ಸೇರದಂತೆ ಹಲವು ಕಡೆ ಈ ಡಾಕ್ಯುಡ್ರಾಮಾವನ್ನು ಚಿತ್ರೀಕರಣ ಮಾಡಲಾಗಿದೆ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.