ಗದಗ: ಬಸ್ ಛಾವಣಿ ಸೋರುತ್ತಿದ್ದು, ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡುತ್ತಿರುವ ಘಟನೆ ಗದಗ (Gadaga) ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಸುರಿದ ಮಳೆಗೆ ಗದಗದಿಂದ ಮುಂಡರಗಿಗೆ ಹೊರಟಿದ್ದ ಬಸ್ನ ಛಾವಣಿ ಸೋರಿದ್ದು, ಕೆಲವು ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡಿದ್ರೆ ಇನ್ನು ಕೆಲವರು ಪರದಾಡುವಂತಾಯಿತು. ಅದರಲ್ಲೂ ಗುಡುಗು, ಸಿಡಿಲು ಸಹಿತ ಜೋರಾದ ಮಳೆ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲೂ ಬಸ್ನ ಬಾಗಿಲು ಸಹ ಇಲ್ಲ ಎಂದು ಪ್ರಯಾಣಿಕನೋರ್ವ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ದತ್ತಪೀಠ ಮಾರ್ಗದಲ್ಲಿ 250 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಕಾರು, ಐವರು ಪಾರು
ಡಕೋಟಾ ಬಸ್ಗಳ ಅವ್ಯವಸ್ಥೆ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಗ್ಯಾರಂಟಿ ಬಂದಾಗಿನಿಂದ ಬಸ್ನಲ್ಲಿ ಸುರಕ್ಷಿತವಾಗಿ ಊರು ತಲುಪುತ್ತೇವೋ ಇಲ್ಲವೋ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಸುಸಜ್ಜಿತ ಬಸ್ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Mysuru Dasara | ಜಂಬೂ ಸವಾರಿ ರೂಟ್ ಮ್ಯಾಪ್ ಹೇಗಿದೆ?
ಬಸ್ನಲ್ಲಿ ನೆನೆದುಕೊಂಡು ಪ್ರಯಾಣ ಮಾಡುವುದು ತುಂಬಾ ಸಮಸ್ಯೆ. ಅದು ಯಾವ ಘಟಕದ ಬಸ್ ಎಂದು ಪರಿಶೀಲನೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತೇನೆ ಎಂದು ಗದಗ ಸಾರಿಗೆ ಘಟಕದ ಜಿಲ್ಲಾ ನಿಯಂತ್ರಣಾಧಿಕಾರಿ ದೇವರಾಜ ಅವರು ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬರೋಬ್ಬರಿ 1.51 ಲಕ್ಷ ರೂ.ಗೆ ಮೂರು ತಿಂಗಳ ಕರು ಮಾರಾಟ