ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

Public TV
1 Min Read
Village accountant

ಗದಗ: ರೈತನ ಜಮೀನಿನ ಪಹಣಿ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮಲೆಕ್ಕಾಧಿಕಾರಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫಿರೋಜ್‍ಖಾನ್ ಗೋರಿಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫಿರೋಜ್‍ಖಾನ್ ಪುಟಂಗಾವ್ ಬಡ್ನಿ ಗ್ರಾಮದ ರೈತ ರಾಮಪ್ಪ ಅಣ್ಣಿಗೇರಿ ಅನ್ನುವರ ಜಮೀನಿನ ಪಹಣಿ ಬದಲಾವಣೆಗೆ 14 ಸಾವಿರ ರೂಪಾಯಿ ಲಂಚ ಇಟ್ಟಿದ್ದನು.

Village accountant1

ಮನೆಗೆ ಬಂದು ಹಣ ಕೊಟ್ಟರೆ ಪಹಣಿ ಮನೆಯಲ್ಲಿ ಕೊಡುತ್ತೇನೆ. ಹಣ ಮನೆಗೆ ತೆಗೆದುಕೊಂಡು ಬಾ ಎಂದು ರೈತನಿಗೆ ಗ್ರಾಮ ಲೆಕ್ಕಾಧಿಕಾರಿ ಫಿರೋಜ್‍ಖಾನ್ ಹೇಳಿದ್ದನು. ಮನೆಯಲ್ಲಿ ಹಣ ನೀಡುವ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿ.ವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *