ಗದಗ: ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದರಿಂದ ರೊಚ್ಚಿಗೆದ್ದ ರೈತರು ಭಾರೀ ಗಲಾಟೆ ಎಬ್ಬಿಸಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ ಎಪಿಎಂಸಿನಲ್ಲಿ ಈರುಳ್ಳಿ ಬೆಳೆಯುವ ರೈತರು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಕುರ್ಚಿ, ಅಂಗಡಿ ಗ್ಲಾಸ್ ಒಡೆದು, ದಲ್ಲಾಳಿಗಳಿಗೆ ಗೂಸಾ ನೀಡಿದ್ದಾರೆ. ರೈತರ ಆಕ್ರೋಶಕ್ಕೆ ದಲ್ಲಾಳಿ ಹಾಗೂ ವರ್ತಕರು ಕಂಗಾಲಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ನೂರಾರು ರೈತರು ಗಲಾಟೆ ಮಾಡಿದ್ದಾರೆ. ಈ ಹಿಂದೆ ಈರುಳ್ಳಿ ಬೆಲೆ ಒಂದು ಕ್ವಿಂಟಾಲ್ ಗೆ 2 ಸಾವಿರದಿಂದ 3 ಸಾವಿರದವರೆಗೆ ಇತ್ತು. ಆದರೆ ಇಂದು ದಿಢೀರ್ ಅಂತ 200ರೂ. ಗೆ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಕಂಗಾಲಾದ ರೈತರು ಸಿಟ್ಟಿಗೆದ್ದಿದ್ದಾರೆ.