Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಕಾಲಗರ್ಭ ಸೇರುತ್ತಿವೆ ಗದಗ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳು

Public TV
Last updated: January 1, 2020 7:36 pm
Public TV
Share
2 Min Read
GDG Historical temple
SHARE

ಗದಗ: ಕರ್ನಾಟಕ ವಾಸ್ತು ಶಿಲ್ಪ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆ ಬಂಗಾರದ ಸಂಪುಟ ಎನ್ನಲಾಗುತ್ತಿದೆ. ಇಂಥ ಭವ್ಯ ವಾಸ್ತು ಕಲೆಯ ಸಂಪದವನ್ನು ಪಡೆದ ಭಾಗ್ಯ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಗಿದೆ.

ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿನ 12ನೇ ಶತಮಾನದ ಚಾಲುಕ್ಯರ ಕಾಲದ ಐತಿಹಾಸಿಕ ಕಲ್ಮೇಶ್ವರ ಸ್ಮಾರಕವೂ ಸೂಜಿಗಲ್ಲಿನಂತೆ ನೋಡುಗರನ್ನು ಸೆಳೆಯುತ್ತದೆ. ಆದರೆ ಈ ವಾಸ್ತುಶಿಲ್ಪಗಳಿಗೆ ರಕ್ಷಣೆ, ಸೂಕ್ತ ನಿರ್ವಹಣೆಯಿಲ್ಲದ ಪರಿಣಾಮ ಕಾಲಗರ್ಭ ಸೇರುವ ತವಕದಲ್ಲಿದೆ ಎಂಬುವುದು ಬೇಸರದ ಸಂಗತಿ.

GDG Historical temple B

ಅಧ್ಯಾತ್ಮಿಕ ಸಾಧನೆಯ ಕುರುಹುಗಳ ಸ್ಥಾನವಾಗಿರುವ ಈ ಕಲ್ಯಾಣದ ದೇವಾಲಯ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ಪಡೆದಿದೆ. ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನವರಂಗದ ರಚನೆಯಾಗಿರುವ ಎತ್ತರದ ಕಟ್ಟೆಯನ್ನು ಇದುವರೆಗೂ ಕಾಣುತ್ತೇವೆ. ಸ್ವಲ್ಪಮಟ್ಟಿಗೆ ವಿಸ್ತಾರವಾಗಿರುವ ಗರ್ಭಗೃಹವು ಲಿಂಗವನ್ನು ಹೊಂದಿರುವುದು. ಮೇಲ್ಭಾಗದಲ್ಲಿ ಅಲಂಕರಣೆ ಚಿತ್ರಗಳನ್ನು ಬಿಡಿಸಲಾಗಿದೆ. ಗರ್ಭಗೃಹದ ಒಳಗೋಡೆಯಲ್ಲಿ ಸುತ್ತಲೂ ಕಟ್ಟೆಯನ್ನು ರಚಿಸಿದ್ದಾರೆ. ಬಾಗಿಲವಾಡವು ಪಟ್ಟಿಕೆಗಳನ್ನು ಹೊಂದಿರುವುದು ಅಲ್ಲದೇ, ಅದು ಸಾದಾ ರಚನೆಯಿಂದ ಕೂಡಿದೆ. ದೇವಾಲಯದ ಅಂತರಾಳವು ಬರಿದಾಗಿದೆ. ಅದರ ಬಾಗಿಲವಾಡವು ಪಂಚ ಪಟ್ಟಿಕೆಗಳಿಂದ ರಚನೆಯಾಗಿದೆ.

GDG Historical temple A

ಪ್ರಾಚೀನ ದೇವಾಲಯದ ಅಧಿಷ್ಠಾನ ಹಾಗೂ ಹೊರ ಗೋಡೆಯ ಭಾಗಗಳು ಹೆಚ್ಚಿನ ಅಲಂಕರಣೆಯಿಂದ ಕೂಡಿವೆ. ಅಧಿಷ್ಠಾನ ಭಾಗವು ಉಪಾನ, ಜಗತಿಗಳ, ಕಪೋತ ಹಾಗೂ ತ್ರಿಪಟ್ಟಕುಮುದ ರಚನೆಯನ್ನು ಸ್ಪಷ್ಟವಾಗಿ ಹೊಂದಿದೆ. ಅಧಿಷ್ಠಾನದಲ್ಲಿರುವ ಜಗತಿ ಭಾಗವು ಸ್ವಲ್ಪಮಟ್ಟಿಗೆ ಎತ್ತರದವಾಗಿದೆ. ಹೊರಗೋಡೆಯು ಅನೇಕ ರೀತಿಯ ಅಲಂಕರಣೆಯಿಂದ ಕೂಡಿದೆ. ಅರ್ಧ ಕಂಬಗಳನ್ನು ಪಂಚಶಾಖೆಯನ್ನು ಹೊಂದಿರುವ ಕಂಬಗಳ ಅಲಂಕರಣೆ ಹಾಗೂ ಹೊರಗೋಡೆಯಲ್ಲಿ ಕೆತ್ತಿರುವ ಅರ್ಧಕಂಬಗಳ ಮೇಲೆ ಚಿಕ್ಕ ಶಿಖರಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ಕೀರ್ತಿಮುಖ, ಯಾಳಿ ಹಾಗೂ ಗಜ ಸವಾರಿ ಅಲಂಕಾರವನ್ನು ಗೋಡೆಯ ಭಾಗದಲ್ಲಿ ವಿಶೇಷವಾಗಿ ಕೆತ್ತಲಾಗಿದೆ.

ಗರ್ಭಗೃಹದ ಹೊರಗೋಡೆಯಲ್ಲಿ ಮೂರು ಕಡೆಗಳಲ್ಲಿ ಕೋಷ್ಟಗಳಿವೆ. ಇಲ್ಲಿರುವ ಎಲ್ಲ ಕೋಷ್ಠಗಳು ಬರಿದಾಗಿವೆ. ಅವುಗಳ ಮೇಲಿನ ಶಿಖರ ರಚನೆ ಆಕರ್ಷಕವಾಗಿದೆ. ಈ ಶಿಖರ ಕೆತ್ತನೆಯಲ್ಲಿ ಏಳು ತಲಗಳನ್ನು ನಿರ್ಮಿಸಿದ್ದು ಪ್ರತಿ ತಲದಲ್ಲಿ ಕೀರ್ತಿಮುಖ ಹಾಗೂ ಕಪೋತಗಳನ್ನು ರಚಿಸಿದ್ದಾರೆ. ಚಿಕ್ಕ ಶಿಖರದಲ್ಲಿ ಎರಡು ತಲಗಳ ನಂತರ ಅರ್ಧಕಂಬಗಳ ಮಂಟಪವನ್ನು ಕಂಡರಿಸಲಾಗಿದೆ. ಶಿಖರವು ಗ್ರೀವ, ಕಳಸ, ಮತ್ತು ಸ್ಥೂಪಿ ಭಾಗಗಳನ್ನು ಸಹ ಹೊಂದಿದೆ.

GDG Historical temple C

ದೇವಾಲಯದ ಮೇಲ್ಛಾವಣಿ ಹಾಗೂ ಶಿಖರವು ಸಂಪೂರ್ಣವಾಗಿ ಬಿದ್ದುಹೋಗಿದೆ. ಗೋಪುರ ಇಲ್ಲ, ಮುಂಭಾಗಕ್ಕೆ ಹಾಗೂ ಒಳಮೈಗೆ ಸುಣ್ಣವನ್ನು ಬಳೆಯಲಾಗಿದೆ. ದೇವಸ್ಥಾನದ ಎದುರಿಗೆ ನಂದಿ ಇದೆ. ಆದರೆ ಅದರ ಮುಖವೇ ಇಲ್ಲ. ಸ್ಥಳೀಯವಾಗಿ ಸಿಗುವ ಕಲ್ಲು-ಗಾರೆಗಳಿಂದ ಮೇಲ್ಛಾವಣೆಯನ್ನು ಮಾತ್ರ ದುರಸ್ತಿಗೊಳಿಸಲಾಗಿದೆ. ಸುಂದರವಾದ ಕೆತ್ತನೆಗಳಿಂದ ಕೂಡಿರುವ ಈ ಪ್ರಾಚೀನ ದೇವಾಲಯದ ಬಗೆಗೆ ಯಾವುದೇ ಲಿಖಿತ ಮಾಹಿತಿಗಳು ಲಭ್ಯವಿಲ್ಲ. ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಭವ್ಯ ಸ್ಮಾರಕವನ್ನು ಸಂರಕ್ಷಿಸಿ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

TAGGED:gadagGajendragadHistorical TemplenaregalPublic TVTotaganti Villageಕರ್ನಾಟಕ ವಾಸ್ತು ಶಿಲ್ಪಕಲ್ಯಾಣ ಚಾಲುಕ್ಯರುಗಜೇಂದ್ರಗಡಗದಗನರೇಗಲ್ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
11 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
12 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
15 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
1 day ago

You Might Also Like

Haveri Car Bus Accident
Crime

ಹಾವೇರಿ | ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ

Public TV
By Public TV
9 minutes ago
Narayanapura Dam
Districts

ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

Public TV
By Public TV
33 minutes ago
Ahmedabad Air India Plane Crash 2
Latest

ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

Public TV
By Public TV
38 minutes ago
Ahmedabad Air India Plane Crash 1
Latest

ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

Public TV
By Public TV
46 minutes ago
Ahmedabad Plane Crash 1 1
Latest

ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

Public TV
By Public TV
1 hour ago
Jagannath Rath Yatra
Latest

ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?