ಗದಗ: ಜಿಲ್ಲೆಯ ಬೆಟಗೇರಿ ಮುಕ್ತಿಧಾಮ ಸ್ಮಶಾನದಲ್ಲಿ ಮೃತದೇಹವೊಂದು ಅರೆಬರೆ ಸುಟ್ಟಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಬೆಟಗೇರಿ ಆನಂದ್ ಅಸುಂಡಿ ಎಂಬವರು ಮೃತಪಟ್ಟಿದ್ದರು. ಈ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಸ್ಮಶಾನದ ಕಮೀಟಿಯವರು ಕಟ್ಟಿಗೆಯಿಂದ ಸುಡದೇ, ಕೇವಲ ಕ್ವಾಯಿಲ್ ಮೂಲಕ ಸುಟ್ಟಿದ್ದಾರೆ. ಇದರಿಂದ ಮೃತದೇಹ ಸರಿಯಾಗಿ ಸುಟ್ಟಿಲ್ಲ. ಇಂದು ಕುಟುಂಬದವರು ಅಸ್ತಿ ಹೊತ್ತೊಯಲು ಬಂದಾಗ ಈ ದೃಶ್ಯ ನೋಡಿ ಬೆರಗಾಗಿದ್ದಾರೆ.
ಸರಿಯಾಗಿ ಹಣ ತೆಗೆದುಕೊಳ್ಳುತ್ತಾರೆ. ಆದರೆ ಸರಿಯಾಗಿ ಕೆಲಸ ಮಾಡಲ್ಲ. ಅಸ್ತಿ ಬಳೆದು ಪಿಂಡ ಬಿಡುವುದಾದರೂ ಹೇಗೆ? ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಸ್ಮಶಾನ ಸಮಿತಿಯವರು ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿ ಸಮಿತಿಯವರನ್ನು ಕೇಳಿದರೆ ಮುಕ್ತಿಧಾಮ ಸಮಿತಿ ರಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.