ನೆರೆಗೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ಹೃದಯಾಘಾತ, ವೃದ್ಧೆ ಸಾವು

Public TV
1 Min Read
gdg

ಗದಗ: ನೆರೆಗೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ವೃದ್ಧೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ಹಣಮವ್ವ ಲಿಂಗದಾಳ (62) ಮೃತಪಟ್ಟ ವೃದ್ಧೆ. ಮಲಪ್ರಭಾ ನದಿ ಪ್ರವಾಹ ಹಿನ್ನೆಲೆ ಬೂದಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಈ ಕಾರಣ ವೃದ್ಧೆಯನ್ನು ಗಂಜಿ ಕೇಂದ್ರ ಶಿಫ್ಟ್ ಮಾಡಲಾಗಿತ್ತು.

gdg2

ಮಳೆ ನಿಂತು ಪ್ರವಾಹ ಕಡಿಮೆಯಾದ ಬಳಿಕ ಶನಿವಾರ ಸಂಜೆ ವೇಳೆ ವೃದ್ಧೆ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಪ್ರವಾಹದ ಹಿನ್ನೆಲೆ ಧರೆಗುರುಳಿದ ಮನೆಯ ಸ್ಥಿತಿ ನೋಡಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ನರಗುಂದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *