ಮೈಸೂರು: ಮೊಮ್ಮಗನ ಹುಟ್ಟುಹಬ್ಬದ ಪ್ರಯುಕ್ತ ನೆನಪಿಗಾಗಿ ಸಚಿವ ಜಿ.ಟಿ ದೇವೇಗೌಡ ಅವರು ಹೆಣ್ಣುಲಿಯೊಂದನ್ನು ದತ್ತು ಪಡೆದಿದ್ದಾರೆ.
ಜಿಟಿಡಿ ಅವರ ಮಗ ಹರೀಶ್ ಗೌಡರ ಏಕೈಕ ಪುತ್ರ ಸಂವೇದ್ ಗೌಡ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಲ್ಲಿನ ಹುಲಿಯನ್ನು ಜಿಟಿಡಿ ದತ್ತು ಪಡೆದಿದ್ದಾರೆ. ಮೊಮ್ಮಗನ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದ ನೆನಪಿಗಾಗಿ ಚಾಮುಂಡಿ ಹೆಸರಿನ ಹೆಣ್ಣು ಹುಲಿಯನ್ನು ಜಿಟಿಡಿ ಅವರು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ರಾಜಕಾರಣ ಹಾಗೂ ರಾಜೀನಾಮೆಯ ಹೈಡ್ರಾಮಗಳು ನಡುಯುತ್ತಿವೆ. ಈ ಮಧ್ಯೆ ಜಿಟಿಡಿ ಅವರು ವನ್ಯ ಜೀವಿಗಳ ಮೇಲೆ ಒಲವನ್ನು ತೋರಿರುವುದು ಎಲ್ಲರು ಮೆಚ್ಚುವಂತ ವಿಷಯವಾಗಿದೆ.