– ಕಾಂಗ್ರೆಸ್ನಲ್ಲಿ ಹಿಂದೂಗಳಿಲ್ವಾ, ನಾವು ಹಿಂದೂಗಳಲ್ವಾ; ಬಿಜೆಪಿ ನಡೆಗೆ ಗೃಹ ಸಚಿವ ಬೇಸರ
ಬೆಂಗಳೂರು: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಯ (Suhas Shetty) ಹತ್ಯೆ ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.
ಮಂಗಳೂರಿನಲ್ಲಿ (Mangaluru) ಗುರುವಾರ ರಾತ್ರಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಕುರಿತು ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ 8:30ರ ಸುಮಾರಿಗೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈಗಾಗಲೇ ನಾವು ಆಕ್ಷನ್ ತೆಗೆದುಕೊಂಡಿದ್ದೇವೆ. ಯಾರು ಈ ಕೆಲಸ ಮಾಡಿದ್ದಾರೆ ಅವರಿಗೆ ಕಾನೂನು ಕ್ರಮ ಆಗಲಿದೆ. ಇದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ ಎಂದರು. ಇದನ್ನೂ ಓದಿ: ಕೊಲೆಗಡುಕರು, ಅತ್ಯಾಚಾರಿಗಳು ಸಿಕ್ಕರೆ ಎನ್ಕೌಂಟರ್ ಮಾಡಿ: ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಾಳ್ ಖಂಡನೆ
ನಾಲ್ಕು ತಂಡಗಳನ್ನು ರಚನೆ ಮಾಡಿ ತನಿಖೆಗೆ ಕಳುಹಿಸಿದ್ದೇವೆ. ಈ ರೀತಿ ಘಟನೆ ಆಗೋದಕ್ಕೆ ಬಿಡಲ್ಲ. ಮಂಗಳೂರು ಜನ ಶಾಂತಿ ಕಾಪಾಡಿ. ಸರ್ಕಾರ ನಿಮ್ಮ ಜೊತೆ ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದೇವೆ. ತನಿಖೆ ಮುಂದುವರೆದಿದ್ದು, ಆರೋಪಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ. ಇದನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಲ್ಲ. ಯಾವುದೇ ಪಕ್ಷದರಾಗಿದ್ದರೂ ಬಿಡಲ್ಲ. ಅದು ಯಾರೇ ಆಗಿದ್ದರೂ ಕೂಡ ಕಠಿಣ ಕ್ರಮ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಕೇಸ್ ವಿಚಾರದಲ್ಲಿ ಬಿಜೆಪಿಯವ್ರು ಬೆಂಕಿ ಹಚ್ಚೋದು ಬೇಡ – ದಿನೇಶ್ ಗುಂಡೂರಾವ್
ಈ ಕಾರಣಕ್ಕಾಗಿ ಯಾವುದೇ ಅಹಿತಕರ ಘಟನೆಗಳು ಆಗಬಾರದು. ಹಾಗಾಗಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಾಗಲೇ ವರದಿ ಕೇಳಿದ್ದೇನೆ. ಈ ರೀತಿ ಘಟನೆಗೆ ಕಾರಣರಾದವನ್ನು ಹತ್ತಿಕ್ಕಲು ಕ್ರಮ ವಹಿಸುತ್ತೇವೆ. ಈ ಪಕ್ಷ, ಆ ಪಕ್ಷ ಅಂತ ಏನಿಲ್ಲ. ಶಾಂತಿ ಕಾಪಾಡಲು ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುಹಾಸ್ಗೆ ಆತ್ಮರಕ್ಷಣೆಗೆ ಒಂದು ದೊಣ್ಣೆಯನ್ನೂ ಇಟ್ಟುಕೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ: ಹರೀಶ್ ಪೂಂಜಾ
ಕಾನೂನು ಸುವ್ಯವಸ್ಥೆ ಹಾಳಾಗಿದೆ ಅನ್ನೋ ಬಿಜೆಪಿ (BJP) ಆರೋಪದ ಕುರಿತು ಪ್ರತಿಕ್ರಿಯಿಸಿ, ನಾವು ಕೊಲೆ ಆಗಬೇಕು ಅಂತ ಬಯಸಲ್ಲ. ಯಾವುದೇ ಸರ್ಕಾರ ಆದರೂ ಶಾಂತಿ ಕಾಪಾಡಲಿ ಅನ್ನುತ್ತದೆ. ಇದನ್ನು ಯಾವ ರೀತಿ ನಿಭಾಯಿಸಬೇಕು. ಯಾವ ರೀತಿ ಕ್ರಮ ಆಗಬೇಕು ಅಂತಾ ನೋಡ್ತಾ ಇದ್ದೀವಿ. ಆರೋಪಿಗಳು ಯಾರು ಇದ್ದಾರೆ ಅವರನ್ನ ಕಾನೂನಿನಡಿಗೆ ತರಲು ಮುಂದಾಗುತ್ತೇವೆ. ಶೀಘ್ರವಾಗಿ ಆರೋಪಿಗಳನ್ನ ಹಿಡಿಯುತ್ತೇವೆ. ನಾವೆಲ್ಲರೂ ಹಿಂದುಗಳೇ, ಕೊಲೆ ಆಗಿದೆ ಕೊಲೆ ಮಾಡಿದವರನ್ನ ಹಿಡಿಯುತ್ತೇವೆ. ಅದಕ್ಕೆ ಈ ರೀತಿ ಹೇಳೋದು ಸರಿಯಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣ್ತಿದೆ: ಬಿವೈವಿ ಕಿಡಿ
ಯಾರೇ ಈ ಕೊಲೆ ಮಾಡಿದವರ ವಿರುದ್ಧ ಕ್ರಮ ಆಗಲಿದೆ. ಹಿಂದೆಯೂ ಕಠಿಣ ಕ್ರಮ ಆಗಿದೆ. ಈಗಲೂ ಕೂಡ ಅದು ಆಗುತ್ತದೆ. ಕಾಂಗ್ರೆಸ್ನಲ್ಲಿ ಹಿಂದೂಗಳು ಇಲ್ವಾ. ನಾವ್ಯಾರು ಹಿಂದುಗಳು ಅಲ್ವಾ. ಇದಕ್ಕೆ ಈ ರೀತಿ ವಿಶ್ಲೇಷಣೆ ಮಾಡೋದು ಸರಿ ಅಲ್ಲ ಎಂದರು.