ಬೆಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Mass Burial) ಬಗ್ಗೆ ಎಸ್ಐಟಿ ತನಿಖೆ ಮುಗಿಯುವ ವರೆಗೂ ನಾನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದ ಹೆಸರು ಹಾಳಾಗೋದಕ್ಕೆ ಬಿಡೋದಿಲ್ಲ ಅಂತಾ ಮಾಜಿ ಸಂಸದ, ಕಾಂಗ್ರೆಸ್ನ ಹಿರಿಯ ಧುರೀಣ ಜನಾರ್ದನ ಪೂಜಾರಿ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ನ ಹಲವು ಶಾಸಕರು ಸಹ ಇದಕ್ಕೆ ದನಿಗೂಡಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್, ಈ ಬಗ್ಗೆ ಸಾಕಷ್ಟು ಹೇಳಿಕೆಗಳನ್ನ ನಾನು ಕೂಡ ಗಮನಿಸಿದ್ದೇನೆ. ಎಸ್ಐಟಿ ತನಿಖೆ ಮುಗಿಯೋವರೆಗೂ ನಾವು ಮಾತಾಡೋದು ಸಮಂಜಸವಲ್ಲ. ವಾಸ್ತವಾಂಶ ಏನಿದೆ ಅಂತಾ ಗೊತ್ತಾಗೋದೆ ತನಿಖೆ ಮುಗಿದ ಮೇಲೆ ಎಂದು ತಿಳಿಸಿದ್ದಾರೆ.
13 ಕಡೆ ಸ್ಥಳ ಗುರುತಿಸಿದ್ದರು. ಈಗ 16, 19 ಆಗಿದೆ. ಎಸ್ಐಟಿಯಿಂದ ಅಂತಿಮ ತನಿಖೆ ಮುಗಿಯೋವರೆಗೂ ಏನು ಮಾತಾಡಲ್ಲ. ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಅಲ್ಲಿ ಉತ್ತರ ನೀಡಲಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿ, ಚರ್ಚ್ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ