– ಬಿಜೆಪಿಯವರು ಅಂದು ಒಪ್ಪಿಗೆ ಕೊಟ್ಟು, ಇಂದು ವರದಿ ಸರಿಯಿಲ್ಲ ಅಂತಿದ್ದಾರೆ
ಬೆಂಗಳೂರು: ತುಮಕೂರಿಗೆ (Tumkuru) ತೊಂದರೆ ಆಗಲ್ಲ ಅಂತಾ ತಾಂತ್ರಿಕ ವರದಿ ಕೊಟ್ಟಿದ್ದರು. ಈ ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು.
ತುಮಕೂರು ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ (Hemavathi Express Canal) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಸಚಿವರು, ತುಮಕೂರು ಎಸ್ಪಿಯಿಂದ ದೂರವಾಣಿ ಮೂಲಕ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ತುಮಕೂರಿಗೆ ತೊಂದರೆ ಆಗಲ್ಲ ಅಂತಾ ಅಧಿಕಾರಿಗಳು ತಾಂತ್ರಿಕ ವರದಿ ಕೊಟ್ಟಿದ್ದರು. ತಾಂತ್ರಿಕ ವರದಿ ಬಂದ ಬಳಿಕವೇ ಕೆಲಸ ಶುರು ಮಾಡಿದ್ದೇವೆ. ಇದನ್ನ ಬಿಜೆಪಿ ಶಾಸಕರು ಸಹ ಒಪ್ಪಿಕೊಂಡಿದ್ದರು. ಆದರೆ ಈಗ ತಾಂತ್ರಿಕ ವರದಿ ಸರಿ ಇಲ್ಲ ಅಂತಿದ್ದಾರೆ ಎಂದರು. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್ ಇದೆ: ಹೆಚ್.ಸಿ.ಬಾಲಕೃಷ್ಣ
1,000 ಕೋಟಿ ಕೊಟ್ಟಿದ್ದೇವೆ
ತಾಂತ್ರಿಕ ಸಮಿತಿ ವರದಿ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ. ತಾಂತ್ರಿಕವಾಗಿ ಸಮಸ್ಯೆ ಆಗಲ್ಲ ಎಂದು ವರದಿ ಬಂದಿದೆ. ಉಪ ಮುಖ್ಯಮಂತ್ರಿಯವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ತುಮಕೂರು ಬಿಜೆಪಿ ಶಾಸಕರು ಇದ್ದರು. ತುಮಕೂರಿನಿಂದ ರಾಮನಗರಕ್ಕೆ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ 1000 ಕೋಟಿ ರೂ. ಹಣವನ್ನು ಯೋಜನೆಗೆ ಕೊಟ್ಟಿದ್ದೇವೆ, ಹಣ ಕೂಡ ಬಿಡುಗಡೆ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ
ಆಗ ತೊಂದರೆ ಆಗುತ್ತೆ ಅಂತಾ ಬಿಜೆಪಿ ಶಾಸಕರು, ಎಲ್ಲರೂ ಹೇಳಿದ್ದರು. ಆದಾದ ಬಳಿಕ ಸರ್ಕಾರ ತಾಂತ್ರಿಕ ಸಮಿತಿ ರಚನೆ ಮಾಡಿತ್ತು. ತಾಂತ್ರಿಕ ಸಮಿತಿಯು ತುಮಕೂರಿಗೆ ತೊಂದರೆಯಾಗಲ್ಲ ಎಂದು ವರದಿ ನೀಡಿದ ಬಳಿಕವೇ ಸರ್ಕಾರ ಕೆಲಸ ಶುರು ಮಾಡಿದೆ ಎಂದರು. ಇದನ್ನೂ ಓದಿ: ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್
ತುಮಕೂರಿಗೆ ತೊಂದರೆ ಇಲ್ಲ ಅಂತಾ ವರದಿ ಹೇಳಿತ್ತು. ವರದಿಯಲ್ಲಿ ಲಿಂಕ್ ಕೆನಾಲ್ನಿಂದ ತೊಂದರೆ ಆಗುತ್ತದೆ ಎಂದು ಬಂದಿದ್ದರೆ ಮಾಡುತ್ತಿರಲಿಲ್ಲ. ಈಗ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ವಿರೋಧ ಮಾಡುತ್ತಿದ್ದಾರೆ. ಇವತ್ತಿನ ಪ್ರತಿಭಟನೆ ಬಗ್ಗೆ ವರದಿ ಪಡೆಯುತ್ತೇನೆ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದರು.