ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ರಂಜಾನ್ ಹಬ್ಬವನ್ನು ಆಚರಿಸಲು ಮುಸ್ಲಿಂ ಮುಖಂಡರು ಕರೆ ನೀಡಿದ್ದಾರೆ.
ಕೇರಳದ ಕ್ಯಾಲಿಕಟ್ ನಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರ ಹಬ್ಬ ಆಚರಿಸಲು ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಹೀಗಾಗಿ ಕಾಸರಗೋಡು, ಕರ್ನಾಟಕ ಕರಾವಳಿಯಲ್ಲಿ ಭಾಗದಲ್ಲಿ ನಾಳೆ ಹಬ್ಬ ಆಚರಣೆ ನಡೆಯಲಿದೆ.
ಕರಾವಳಿ ಹೊರತುಪಡಿಸಿ ಶನಿವಾರ ರಾಜ್ಯದೆಲ್ಲೆಡೆ ರಂಜಾನ್ ಹಬ್ಬವನ್ನು ಆಚರಿಸಲಾಗುವುದು ಎಂದು ಬೆಂಗಳೂರಿನಲ್ಲಿರುವ ಚಂದ್ರದರ್ಶನ ಸಮಿತಿ ಹೇಳಿದೆ.