ರಾಯಚೂರು: ರಾಜ್ಯದಲ್ಲಿ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರ ಸಮಿತಿ ರಚಿಸಿರುವುದು ಮೂರ್ಖತನ ಅಂತ ನಾಡೋಜ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತದ ಪ್ರಚಲಿತ ಸಮಸ್ಯೆಗಳು ಹಾಗೂ ಪರಿಹಾರಗಳು ವಿಷಯ ಕುರಿತ `ಚಿಂತನ ಮಂಥನ’ ಕಾರ್ಯಕ್ರಮದ ವೇಳೆ ಮಾತನಾಡಿದರು. ಮಾಧ್ಯಮ ನಿಯಂತ್ರಣ ಯಾರಿಂದಲೂ ಸಾಧ್ಯವಿಲ್ಲ. ಮಾಧ್ಯಮದವರು ತಾವೇ ಸ್ವಯಂ ನಿಗ್ರಹಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಇನ್ನೂ ಮುಂದಿನ ಜನ್ಮ ಸಿಗುವುದಾದರೆ ರಾಯಚೂರಿನಲ್ಲಿ ಹುಟ್ಟಲು ಭಯಸುತ್ತೇನೆ. ರಾಯಚೂರು ಅಭಿವೃದ್ದಿಗೆ ಪೂರಕವಾದ ಜಿಲ್ಲೆ, ಇಲ್ಲಿ ಜಲ ವಿದ್ಯುತ್ ವಿಫುಲವಾಗಿದ್ದು ಅಭಿವೃದ್ಧಿ ಹೊಂದುವ ಜಿಲ್ಲೆಯಾಗಿದೆ ಅಂತ ಪಾಟೀಲ ಪುಟ್ಟಪ್ಪ ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿ ಪಿಎಂ ಸಾಲೀಮಠ್ ಹಾಜರಿದ್ದರು.