ಆಹಾರ ಅರಸಿ ಬಂದ 4 ಕಾಡನೆಗಳು ಆಯತಪ್ಪಿ ಕೆರೆಗೆ

Public TV
1 Min Read
Mangaluru Elephant

ಮಂಗಳೂರು: ಆಹಾರ ಅರಸಿ ಬಂದ ನಾಲ್ಕು ಕಾಡಾನೆಗಳು (Elephant) ತೋಟದಲ್ಲಿದ್ದ ಕೆರೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಅಜ್ಜಾವರದ (Ajjavara) ಗ್ರಾಮದಲ್ಲಿ ನಡೆದಿದೆ.

ಬುಧವಾರ ರಾತ್ರಿ ವೇಳೆ ಆಹಾರ ಹುಡುಕುತ್ತಾ ಬಂದಿರುವ ಎರಡು ಮರಿ ಆನೆ ಮತ್ತು ಎರಡು ದೊಡ್ಡ ಆನೆಗಳು ಅಜ್ಜಾವರದ ಸನತ್ ರೈ ಎಂಬವರ ತೋಟದಲ್ಲಿರುವ ಸಣ್ಣ ಕೆರೆಗೆ ಬಿದ್ದಿವೆ. ಗುರುವಾರ ಬೆಳಗ್ಗೆ ತೋಟಕ್ಕೆ ತೆರಳಿದ್ದಾಗ ವಿಚಾರ ತಿಳಿದ ಸನತ್ ರೈ ಅರಣ್ಯ ಇಲಾಖೆಗೆ ( Forest Department) ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಬಳಸಿ ಆನೆಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಕೊಡಗು ವಿಹೆಚ್‍ಪಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ

ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಗ್ರಾಮಸ್ಥರು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ – ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು

Share This Article