ತುಮಕೂರು: ಸಿದ್ದಗಂಗಾ ಹಲವು ‘ಗಂಗಾ’ಗಳ ಸಂಗಮ ಪ್ರವಾಹ. ಇಲ್ಲಿ ಕರ್ಮ ಗಂಗಾ, ಜ್ಞಾನ ಗಂಗಾ, ಗೌರವ ಗಂಗಾ ಹಾಗೂ ಕಾರುಣ್ಯಗಂಗಾಗಳು ಸಮರಸಗೊಂಡು ಹರಿಯುತ್ತಿವೆ. ಜ್ಞಾನ ಯಜ್ಞ ನಡೆದಿದ್ದು ಶತಮಾನಗಳ ಪರ್ಯಂತ ಮುಂದುವರೆದಿದೆ. ಪೂಜ್ಯ ಶ್ರೀ ಸ್ವಾಮೀಜಿಯವರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿ ಶ್ರೀಮಠದ ಪರಿಸರವನ್ನೆಲ್ಲಾ ಕ್ರಿಯಾಶೀಲಗೊಳಿಸಿದೆ. ಕೇವಲ ಭೌತಿಕವಾಗಿಯಲ್ಲ. ನೈತಿಕ ಶಕ್ತಿಯ ಸ್ಫೂರ್ತಿ ಇಲ್ಲಿನ ತಾಯಿ ಬೇರಾಗಿದೆ.
ಮನುಷ್ಯ ಒಳ್ಳೆಯವನಾಗುವುದು ಮುಖ್ಯ. ಒಳ್ಳೆಯವನಾಗುವುದು ಹೇಗೆ? ಒಂದು ಶಿಕ್ಷಣದಿಂದ ಅಥವಾ ತರಬೇತಿಯಿಂದ, ಇನ್ನೊಂದು ಸಂಸ್ಕಾರದಿಂದ. ಸರ್ಕಾರಿ ಶಾಲೆಗಳು ಶಿಕ್ಷಣವನ್ನು ನೀಡುತ್ತವೆ. ಆದರೆ ಸಂಸ್ಕಾರವನ್ನು ಕೊಡಲಾರವು. ಈ ಎರಡೂ ಅಂದರೆ ಶಿಕ್ಷಣ ಮತ್ತು ಸಂಸ್ಕಾರ ಬೇರೆ ಬೇರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!
ಕಾಲೇಜು ನೀಡುವ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದು. ಆದರೆ ಕಾಲೇಜನ್ನು ಬಿಟ್ಟ ನಂತರ ಎಂಥ ಜೀವನವನ್ನು ನಡೆಸಬೇಕೆಂಬುದನ್ನು ಅವರಿಂದ ಪಡೆಯಲಾಗುವುದಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದಾತ ಸಂಸ್ಕಾರಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬರುವುದಲ್ಲದೆ ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ. ಸಿದ್ದಗಂಗಾದಂತಹ ಕ್ಷೇತ್ರಗಳು ನಮಗೆ ಪವಿತ್ರ ಸ್ಥಳಗಳು. ಶ್ರೀಮಠ ತನ್ನ ಸೇವಾ ಚಟುವಟಿಕೆಗಳ ಮೂಲಕ ನೈತಿಕ ಜೀವನದ ಪ್ರಾಮುಖ್ಯತೆಯನ್ನು ಆಚರಿಸಿ ತೋರಿಸುತ್ತಿರುವುದು ಇತಿಹಾಸಕ್ಕೆ ಸುಯೋಗ್ಯವಾದ ನಿದರ್ಶನವಾಗಿದೆ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ
https://www.youtube.com/watch?v=2lK_EgaS96U
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv