ಬೆಳಗ್ಗೆ ಮನೆಯಲ್ಲಿರಿ ಎಂದು ಕಿವಿ ಮಾತು – ಮಧ್ಯಾಹ್ನ ಹೆದ್ದಾರಿಯಲ್ಲಿ ಮೊಮ್ಮಗನೊಂದಿಗೆ ಮಾಜಿ ಸಚಿವರ ಆಟ

Public TV
1 Min Read
tmk srinivas

ತುಮಕೂರು: ಬೆಳಗ್ಗೆ ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಕೊರೊನಾ ಕುರಿತಂತೆ ಮಾತನಾಡಿ ಮನೆಯಿಂದ ಹೊರಗೆ ಬರದಂತೆ ಕಿವಿ ಮಾತು ಹೇಳಿದ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್, ಮಧ್ಯಾಹ್ನ ಆಗುತ್ತಲೇ ಹೆದ್ದಾರಿಯಲ್ಲಿ ಮೊಮ್ಮಗನ ಜತೆ ಆಟವಾಡುತ್ತಾ ತಮ್ಮ ಸಂದೇಶವನ್ನು ತಾವೇ ಬ್ರೇಕ್ ಮಾಡಿದ್ದಾರೆ.

ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ತುಮಕೂರು ನಗರದಿಂದ ಹಾದು ಹೋಗುವ ಬೆಂಗಳೂರು ಹೊನ್ನಾವರ ಹೆದ್ದಾರಿ ಮೇಲೆ ತಮ್ಮ ಮೊಮ್ಮಗನ ಜೊತೆ ಆಟವಾಡಿದ್ದಾರೆ. ರಿಮೋಟ್ ಕಂಟ್ರೋಲ್ ಕಾರಿನೊಂದಿಗೆ ಮೊಮ್ಮಗನಿಗೆ ಆಟವಾಡಿಸಿದ್ದಾರೆ. ಬಿ.ಎಚ್ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದಿದ್ದರಿಂದ ನೇರವಾಗಿ ಹೆದ್ದಾರಿ ಮೇಲೆಯೇ ಮೊಮ್ಮಗನನ್ನು ರಿಮೋಟ್ ಕಂಟ್ರೋಲ್ ಕಾರಿನಲ್ಲಿ ಕೂರಿಸಿ ಆಟವಾಡಿಸಿದ್ದಾರೆ.

S.R.Srinivas

ಕೊರೊನಾ ಭೀತಿಯ ನಡುವೆಯೂ ಶಾಸಕರು ಮೊಮ್ಮಗನೊಂದಿಗೆ ನಡು ಹೆದ್ದಾರಿಯಲ್ಲಿ ಆಟವಾಡಿದ್ದು ಎಷ್ಟುಸರಿ ಎಂದು ಜನರು ಪ್ರಶ್ನಿಸುತಿದ್ದಾರೆ. ಹಲವರು ನಮಗೆ ಕಿವಿ ಮಾತು ಹೇಳುವ ಮೊದಲು ನೀವು ನಿಯಮ ಪಾಲಿಸಿ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *