ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

Public TV
1 Min Read
MND JDS CONGRESS

ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ.

ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಅರ್ಧಕ್ಕರ್ಧ ಮಾಜಿ ಮಂತ್ರಿಗಳು ಇನ್ನು ಸರ್ಕಾರಿ ಬಂಗಲೆ ಖಾಲಿ ಮಾಡಿಲ್ಲ. ಅಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿ ವಾಸ್ತು ಪ್ರಕಾರ ರೆಡಿ ಮಾಡಿದ ಬಂಗಲೆ ಬಿಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ex minister bangle 2

ಸದ್ಯ ಹೊಸ ಸಚಿವರಿಗೆ ಬಂಗಲೆ ಕೊಡುವುದಕ್ಕೆ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬಂಗಲೆ ಖಾಲಿ ಮಾಡಲು ಸೂಚಿಸಿದರು ಮಾಜಿ ಸಚಿವರು ಇನ್ನು ಬಂಗಲೆ ಖಾಲಿ ಮಾಡಿಲ್ಲ. ಮಾಜಿ ಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ಇರುವುದರಿಂದ ಹಾಲಿ ಮಂತ್ರಿಗಳು ಬಂಗಲೆ ಇಲ್ಲದೆ ಪರದಾಡುತ್ತಿದ್ದಾರೆ.

ಸದ್ಯ ಅಧಿಕಾರಿಗಳು ಇದುವರೆಗೂ 3-4 ಸಚಿವರಿಗೆ ಮಾತ್ರ ಬಂಗಲೆ ನೀಡಿದ್ದಾರೆ. ಅಧಿಕಾರಿಗಳು ಬಂಗಲೆ ಬಿಟ್ಟು ಹೋಗ್ರಿ ಎಂದರು ಸಹ ಮಾಜಿ ಸಚಿವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೋಗುತ್ತಿಲ್ಲ. ಇದನ್ನೂ ಓದಿ: ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

ex minister bangle 1

ಬಂಗಲೆ ಖಾಲಿ ಮಾಡದ ಮಾಜಿ ಸಚಿವರು:
* ಸಿದ್ದರಾಮಯ್ಯ- ಮಾಜಿ ಸಿಎಂ, ಕಾವೇರಿ ಬಂಗಲೆ.
* ಪರಮೇಶ್ವರ್ – ಮಾಜಿ ಡಿಸಿಎಂ, ಸದಾಶಿವನಗರ ಬಂಗಲೆ.
* ಎಚ್.ಡಿ.ರೇವಣ್ಣ- ಸೂಪರ್ ಸಿಎಂ, ಕುಮಾರಕೃಪ ಬಂಗಲೆ.
* ಡಿಕೆ ಶಿವಕುಮಾರ್- ಕ್ರಸೆಂಟ್ ರೋಡ್ ಬಂಗಲೆ.
* ಆರ್.ವಿ.ದೇಶಪಾಂಡೆ- ರೇಸ್ ಕೋರ್ಸ್ ಬಂಗಲೆ.
* ಮನಗುಳಿ – ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
* ಬಂಡೆಪ್ಪ ಕಾಶಂಪೂರ್- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
* ರಮೇಶ್ ಜಾರಕಿಹೋಳಿ- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.

Share This Article
Leave a Comment

Leave a Reply

Your email address will not be published. Required fields are marked *