ಬೆಂಗಳೂರು: ಅಪ್ಪ ಅಲ್ಲಿ, ಮಗ ಇಲ್ಲಿ. ಬಿಜೆಪಿಯಿಂದ (BJP) ಕಾಂಗ್ರೆಸ್ಗೆ (Congress) ಬರಬೇಕಿದ್ದ ಅಪ್ಪ ಜೆಡಿಎಸ್ಗೆ (JDS) ಹೊರಟು ನಿಂತಿದ್ದಾರೆ. ಅಪ್ಪ ಜೆಡಿಎಸ್ಗೆ ಹೋದ ಮೇಲೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡೋದು ಹೇಗೆ? ಇದು ರಾಜ್ಯ ʼಕೈʼ ನಾಯಕರ ಹೊಸ ತಲೆಬಿಸಿ.
ಅಪ್ಪ ಕಾಂಗ್ರೆಸ್ ಬಿಟ್ಟರೂ, ನಾನು ಕಾಂಗ್ರೆಸ್ ಅಂತಲೇ ಉಳಿದಿದ್ದ ಮಗನಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್ ಆಗಿತ್ತು. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ಗೆ ಬರುವ ಬಗ್ಗೆ ಮಾತನಾಡಿ ಪುತ್ರನಿಗೆ ಮಡಿಕೇರಿ ಕಾಂಗ್ರೆಸ್ ಟಿಕೆಟ್ ಖಚಿತ ಪಡಿಸಿದ್ದರು. ಆದರೆ ಈಗ ಎ.ಮಂಜು (A.Manju) ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬಿಎಸ್ವೈಗೆ ಬಹುಪರಾಕ್, ವಿಜಯೇಂದ್ರಗೆ ಸಮಾವೇಶಗಳ ಹೊಣೆ – ಬಿಜೆಪಿ ಎಚ್ಚರಿಕೆ ನಡೆ
ಅಪ್ಪ ಜೆಡಿಎಸ್ಗೆ ಹೋದರೇನು. ನಾನಗೆ ಕಾಂಗ್ರೆಸ್ ಟಿಕೆಟ್ ಕೊಡಿ ಎಂದು ಪುತ್ರ ಮಂತರ್ ಗೌಡ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎ.ಮಂಜು ಜೆಡಿಎಸ್ ಹೋಗಲು ಸಿದ್ಧವಾದರೂ ಮಗನದು ಮಾತ್ರ ಕಾಂಗ್ರೆಸ್ ಟಿಕೆಟ್ ಡಿಮ್ಯಾಂಡ್ ಎನ್ನಲಾಗಿದೆ.
ಎ.ಮಂಜು ಪುತ್ರ ಮಂಥರ್ ಗೌಡ ನಡೆ ಕೈ ನಾಯಕರಿಗೆ ಹೊಸ ಪಜೀತಿ ತಂದಿಟ್ಟಿದೆ ಎನ್ನಲಾಗಿದೆ. ಬಹುತೇಕ ಮಡಿಕೇರಿ (Madikeri) ಟಿಕೆಟ್ಗೆ ಮಂಥರ್ ಗೌಡರ ಹೆಸರನ್ನ ಕೈ ನಾಯಕರು ಅಂತಿಮ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲಿಂದಲೇ ಮಂಥರ್ ಗೌಡಗೆ ಈ ಹಿಂದೆ ಕಾಂಗ್ರೆಸ್ನಿಂದ ಪರಿಷತ್ ಟಿಕೆಟ್ ನೀಡಲಾಗಿತ್ತು. ಎ.ಮಂಜು ಪುತ್ರ ಎಂಬ ಮಾನದಂಡದಲ್ಲೆ ಎಂಎಲ್ಸಿ ಟಿಕೆಟ್ ನೀಡಲಾಗಿತ್ತು. ಈಗ ವಿಧಾನಸಭೆಯ ಟಿಕೆಟ್ ಕೊಡುವ ಸಿದ್ದತೆಯಲ್ಲಿದ್ದಾಗಲೆ ಅಪ್ಪ ಜೆಡಿಎಸ್ ಸೇರಿ ತೆನೆ ಹೊರಲು ಮುಂದಾಗಿದ್ದಾರೆ. ಆದರೆ ಮಗ ಮಾತ್ರ ಮಡಿಕೇರಿ ಟಿಕೆಟ್ ಡಿಮ್ಯಾಂಡ್ ಮಾಡಿರೋದು ಕೈ ನಾಯಕರೆ ಗೊಂದಲಕ್ಕೆ ಸಿಲುಕುವಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k