ಹುಬ್ಬಳ್ಳಿ: ಕಾಂಗ್ರೆಸ್ ನವರು ಸಿದ್ದರಾಮಯ್ಯ ನವರೇ ನಮ್ಮ ಸಿಎಂ ಎಂದು ಹೇಳುತ್ತಾರೆ. ಹಾಗಾದ್ರೆ ಈವಾಗಿರೋ ಸಿಎಂ ಏನ್ ಡಮ್ಮಿನಾ? ಕ್ಲರ್ಕ್? ಅಥವಾ ಈಗಿರುವ ಸಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರಿಗೆ ಕಾಂಗ್ರೆಸ್ ನವರು ಕಿರುಕುಳ ನೀಡುತ್ತಿದ್ದಾರೆ ಅಂತ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಪರ ಹಾಗೂ ಪರಮೇಶ್ವರ್ ವಿರೋಧಿ ಗ್ಯಾಂಗ್ ಇದೆ. ಹೀಗಾಗಿ ಎಲ್ಲಿ ಸಿದ್ದರಾಮಯ್ಯ ನವರೇ ಸರ್ಕಾರ ಬೀಳಿಸುತ್ತಾರೆಂಬ ಅನುಮಾನವಿದೆ. ಏಳು ತಿಂಗಳಿನಿಂದ ಸರ್ಕಾರ ಅಭದ್ರತೆಯಿಂದಲೇ ಇದೆ ಅಂದ್ರು.
ಮೈತ್ರಿ ಸರ್ಕಾರ ಕಳಪೆ ಆಡಳಿತ ನೀಡುತ್ತಿದೆ ಎಂದು ಪುಟ್ಟರಾಜು ಅವರೇ ಹೇಳಿದ್ದಾರೆ. ಇನ್ನೂ ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಒಂದೇ ಆಗೋತ್ತಿರೋದು. ಬೇರೆ ಏನೂ ಆಗುತ್ತಿಲ್ಲ ಎಂದಿದ್ದಾರೆ. ಸುಮಲತಾ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂಬರೀಶ್ ನಟರಾಗಿ, ಸಂಸದರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಸುಮಲತಾ ಅವರು ನಮ್ಮ ಪಕ್ಷವನ್ನು ಸಂಪರ್ಕ ಮಾಡಿಲ್ಲ. ಅವರು ಬಂದ್ರೆ ನಾವು ಸ್ವಾಗತ ಮಾಡುತ್ತೆನೆ ಎಂದ್ರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv