ಕಾಂಗ್ರೆಸ್‌ ಸಭೆಯಲ್ಲೇ ಕುಸಿದುಬಿದ್ದ ಶ್ರೀಶೈಲಪ್ಪ, ಆಸ್ಪತ್ರೆಗೆ ದಾಖಲು

Public TV
1 Min Read
Shrishailappa Bidarur

ಬೆಂಗಳೂರು: ಬೀದರ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು(Shrishailappa Bidarur) ಅವರಿಗೆ ಹೃದಯಾಘಾತವಾಗಿದೆ.

ಖಾಸಗಿ ರೆಸಾರ್ಟ್‌ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯುವಾಗಲೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಕಮಲ್ ನಾಥ್ ಆಪ್ತ ಸಹಾಯಕ ಬಿಜೆಪಿ ಸೇರ್ಪಡೆ

ShrishailappaBidarur

ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದು ಶ್ರೀ ಶೈಲಪ್ಪ ವಾಂತಿ ಮಾಡಿಕೊಂಡಿದ್ದಾರೆ. ಕಾರು ಇಳಿದು ಒಳಗೆ ಹೋಗುವಾಗಲೇ ಶ್ರೀಶೈಲಪ್ಪ ಸುಸ್ತಾಗಿದ್ದರು. ಬೆಳಿಗ್ಗೆ ತಿಂಡಿ ತಿನ್ನದೇ ಶ್ರೀಶೈಲಪ್ಪ ಬಿದರೂರು ಸಭೆಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

Live Tv
[brid partner=56869869 player=32851 video=960834 autoplay=true]

Share This Article