ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!

Public TV
1 Min Read
SIDDU HOME

ಬೆಂಗಳೂರು: ಮಾಜಿ ಮುಖ್ಯಮಂಂತ್ರಿ ಸಿದ್ದರಾಮಯ್ಯ ತಮ್ಮ ಅದೃಷ್ಟದ ಮನೆಯಾದ ಕಾವೇರಿ ನಿವಾಸವನ್ನು ಬಿಟ್ಟು ಬೇರೆಡೆ ಹೋಗಲು ಸಿದ್ಧರಾಗಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಕಾವೇರಿ ಬಂಗಲೆ ಇತ್ತು. ಇದು ಸರ್ಕಾರದ ಅಧಿಕೃತ ಬಂಗಲೆಯಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕಾವೇರಿ ಬಂಗಲೆಯಲ್ಲಿ ವಾಸ ಮಾಡಲು ಶುರು ಮಾಡಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾಗೆ ಕಾವೇರಿ ಬಂಗಲೆ ಹೊಂದಿಕೊಂಡಿದೆ. ಯಾವುದೇ ಅಡೆತಡೆಗಳು ಬಂದಿದ್ದರೂ 5 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಾವೇರಿ ಲಕ್ಕಿ ಬಂಗಲೆ ಎಂದು ಎನಿಸಿಕೊಂಡಿತ್ತು.

ಸಿಎಂ ಆಗಿದ್ದಾಗ ಹಾಗೂ ಡಿಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿಯೇ ಇದ್ದರು. ಅಂತಹ ಅದೃಷ್ಟದ ಮನೆ `ಕಾವೇರಿ’ ಯನ್ನು ತೊರೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಐದು ವರ್ಷದಿಂದ ಸರ್ಕಾರಿ ಬಂಗಲೆಯಲ್ಲಿದ್ದ ಸಿದ್ದರಾಮಯ್ಯ, ಇದೀಗ ಖಾಸಗಿ ನಿವಾಸಕ್ಕೆ ತೆರಳಲು ನಿರ್ಧಾರ ಮಾಡಿದ್ದಾರೆ.

ಸಿದ್ದರಾಮಯ್ಯ ಮುಂದಿನ ತಿಂಗಳು ಕಾವೇರಿ ನಿವಾಸವನ್ನು ಖಾಲಿ ಮಾಡಿ ವಿಜಯನಗರದ `ಪ್ರಸಿದ್ಧ’ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಒಂದು ವೇಳೆ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿದರೆ ಸಿದ್ದರಾಮಯ್ಯ ಕಾವೇರಿಯಲ್ಲೇ ಉಳಿಯಲಿ ಆಪ್ತರು ಸಲಹೆ ನೀಡಿದ್ದಾರೆ.

https://www.youtube.com/watch?v=WqHWLJNQrBo

Share This Article
Leave a Comment

Leave a Reply

Your email address will not be published. Required fields are marked *