Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bellary

56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ

Public TV
Last updated: October 31, 2018 10:38 pm
Public TV
Share
2 Min Read
Janardhan Reddy Siddaramaiah PM Modi
SHARE

ಬೆಂಗಳೂರು: ಜನಾರ್ದನ ರೆಡ್ಡಿ ಅವರನ್ನು ಅಸ್ತ್ರವಾಗಿಟ್ಟುಕೊಂಡ ಸಿದ್ದರಾಮಯ್ಯ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ವಿರುದ್ಧ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

ಬಲಿಷ್ಠ ಪಕ್ಷ, ಸಮರ್ಥ ಪ್ರಧಾನಿ, 56 ಇಂಚಿನ ಎದೆ ಇವೆಲ್ಲ ಸರಿ, ಇಂತಹ ಬಿಜೆಪಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ? ಈ ಅನೈತಿಕ ಸಂಬಂಧದ ಹಿಂದಿನ ಗುಟ್ಟೇನು ಎಂದು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆ ಎಸೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನಮ್ಮನ್ನು ಶೇ.10 ಕಮಿಷನ್ ಸರ್ಕಾರ ಎಂದು ಗೇಲಿ ಮಾಡಿದ್ದರು. ಈಗ ನಾನು ಕೇಳುತ್ತೇನೆ, ಈ ಗಣಿಲೂಟಿಕೋರರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲು ನೀವು ಪಡೆದಿರುವ ಕಮಿಷನ್ ಎಷ್ಟು ಎಂದು ಪ್ರಶ್ನಿಸಿದ್ದಾರೆ.

ಬಲಿಷ್ಠ ಪಕ್ಷ, ಸಮರ್ಥ ಪ್ರಧಾನಿ, 56 ಇಂಚಿನ ಎದೆ- ಇವೆಲ್ಲ ಸರಿ, ಇಂತಹ ಬಿಜೆಪಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ? ಈ‌‌ ಅನೈತಿಕ ಸಂಬಂಧದ ಹಿಂದಿನ ಗುಟ್ಟೇನು?@INCKarnataka #BallariByPoll

— Siddaramaiah (@siddaramaiah) October 31, 2018

ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣಾ ಕಾಲದಲ್ಲಿ ಹೇಳಿದ್ದೇನು? ನಾ ಕಾವೊಂಗಾ, ನ ಕಾನೇದೂಂಗಾ ಎಂದಿದ್ದರು. ಹಾಗಿದ್ದರೆ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯವರನ್ನು ಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ? ಅವರನ್ನು ತಿನ್ನಲು ಯಾಕೆ ಬಿಟ್ಟಿದ್ದೀರಿ? ಯಾರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

shah modi

ಜನಾರ್ದನ ರೆಡ್ಡಿ ಪಕ್ಷದ ಪ್ರಚಾರ ಮಾಡಬಾರದೆಂದು ಅಮಿತ್ ಶಾ ಆದೇಶ ನೀಡುತ್ತಾರೆ. ರೆಡ್ಡಿ ಅದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಹಾಗಿದ್ದರೂ ಮೋದಿ ಅವರಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರವರೆಗೆ ಯಾರೂ ಕೂಡಾ ರೆಡ್ಡಿ ವಿರುದ್ಧ ಮಾತನಾಡುವುದಿಲ್ಲ, ಯಾಕೆ ರೆಡ್ಡಿ ಜತೆ ಇವರಿಗೆಲ್ಲ ಏನು ಸಂಬಂಧ ಎಂದು ಪ್ರಶ್ನಿಸಿ ಕುಟುಕಿದ್ದಾರೆ.

ಶ್ರೀರಾಮುಲು ರೆಡ್ಡಿ ಕೈ ಗೊಂಬೆ:
ಶಾಸಕ ಶ್ರೀರಾಮುಲು ಒಬ್ಬ ಹುಂಬ ಮನುಷ್ಯ. ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕಿತ್ತು. ಈಗ ರೆಡ್ಡಿ ಸೋದರರು ಶ್ರೀರಾಮುಲು ಅವರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಆಡಿಸಿದಂತೆ ಶ್ರೀರಾಮುಲು ಆಡುತ್ತಿದ್ದಾರೆ. ರೆಡ್ಡಿ ಸಹೋದರರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ. ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

SriRamulu Siddaramaiah

ಬಿಸಿಲ ನಾಡು ಬಳ್ಳಾರಿಯ ಜನ ಕಷ್ಟಜೀವಿಗಳು, ಸ್ವಾಭಿಮಾನಿಗಳು. ಇಂತಹ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಚಲಾಯಿಸುವ ಪ್ರತಿಯೊಂದು ಮತವೂ ಗಣಿ ಲೂಟಿ ಮಾಡಿ, ಬಳ್ಳಾರಿಯನ್ನು ನರಕಮಾಡಿ ಜೈಲಿಗೆ ಹೋಗಿ ಬಂದು, ಈಗ ಗಡಿಪಾರಾಗಿರುವ ಜನಾರ್ದನ ರೆಡ್ಡಿಯ ವಿರುದ್ಧದ ಮತ ಎಂದು ಮತದಾರರು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಶ್ರೀರಾಮುಲು ಎಂಬ ವ್ಯಕ್ತಿ ಹುಂಬ ಮನುಷ್ಯ. ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕು. ರೆಡ್ಡಿ ಸೋದರರು ಶ್ರೀರಾಮುಲು ಆಡಿಸಿದಂತೆ ಆಡುತ್ತಿರುವ ಒಂದು ಗೊಂಬೆ. ಅವರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ, ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ.@INCKarnataka #BallariByPoll

— Siddaramaiah (@siddaramaiah) October 31, 2018

ಈ ಉಪ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗದಿದ್ದರೂ, ಜನರ ಭಾವನೆಗಳು ಯಾವ ಕಡೆಗಿದೆ ಎಂಬುದನ್ನು ಖಂಡಿತವಾಗಿ ತೋರಿಸುತ್ತದೆ. ಬಳ್ಳಾರಿಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂಬ ಸಂಪೂರ್ಣ ಭರವಸೆ ನನಗಿದೆ. ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಅಂತ ಭರವಸೆ ವ್ಯಕ್ತಪಡಿಸಿದರು.

ಬಳ್ಳಾರಿಯ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಬರಬೇಕಾಗಿದ್ದ ಅಚ್ಚೇ ದಿನ್ ಅಂಬಾನಿ, ಅದಾನಿಗಳಿಗೆ ಬಂದಿದೆ. ಈ ಬಗ್ಗೆ ಉತ್ತರಿಸಬೇಕಿದ್ದ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣಾ ಕಾಲದಲ್ಲಿ @narendramodi ಹೇಳಿದ್ದೇನು? ನಾ ಕಾವುಂಗಾ, ನ ಕಾನೇ ದೂಂಗಾ? ಹಾಗಿದ್ದರೆ ಗಣಿ ಲೂಟಿಕೋರ ಜನಾರ್ಧನ ರೆಡ್ಡಿಯವರನ್ನು ಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ? ಅವರನ್ನು ತಿನ್ನಲುಯಾಕೆ ಬಿಟ್ಟಿದ್ದೀರಿ? ಯಾರಿಗೆ ಎಷ್ಟು ಕಮಿಷನ್?@INCKarnataka #BallariByPoll

— Siddaramaiah (@siddaramaiah) October 31, 2018

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಜನಾರ್ಧನ ರೆಡ್ಡಿ ಪಕ್ಷದ ಪ್ರಚಾರ ಮಾಡಬಾರದೆಂದು ಅಮಿತ್ ಶಹಾ ಆದೇಶ ನೀಡುತ್ತಾರೆ. ರೆಡ್ಡಿ ಅದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಹಾಗಿದ್ದರೂ ಮೋದಿಯವರಿಂದ ಹಿಡಿದು ಯಡಿಯೂರಪ್ಪನವರ ವರೆಗೆ ಯಾರೂ ಕೂಡಾ ರೆಡ್ಡಿ ವಿರುದ್ಧ ಮಾತನಾಡುವುದಿಲ್ಲ. ಯಾಕೆ?
ರೆಡ್ಡಿ ಜತೆ ಇವರಿಗೆಲ್ಲ ಏನು ಸಂಬಂಧ? @INCKarnataka #BallariByPoll

— Siddaramaiah (@siddaramaiah) October 31, 2018

ಬಿಸಿಲ ನಾಡು ಬಳ್ಳಾರಿಯ ಜನ ಕಷ್ಟಜೀವಿಗಳು, ಸ್ವಾಭಿಮಾನಿಗಳು. ಇಂತಹಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಚಲಾಯಿಸುವ ಪ್ರತಿಯೊಂದು ಮತವೂ ಗಣಿ ಲೂಟಿ ಮಾಡಿ ಬಳ್ಳಾರಿಯನ್ನು ನರಕಮಾಡಿ ಜೈಲಿಗೆ ಹೋಗಿ ಬಂದು ಈಗ ಗಡಿಪಾರಾಗಿರುವ ಜನಾರ್ಧನ ರೆಡ್ಡಿಯ ವಿರುದ್ಧದ ಮತ.@INCKarnataka #BallariByPoll

— Siddaramaiah (@siddaramaiah) October 31, 2018

ಬಳ್ಳಾರಿಯ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಬರಬೇಕಾಗಿದ್ದ ಅಚ್ಚೇ ದಿನ್ ಅಂಬಾನಿ, ಅದಾನಿಗಳಿಗೆ ಬಂದಿದೆ. ಈ ಬಗ್ಗೆ ಉತ್ತರಿಸಬೇಕಿದ್ದ ಪ್ರಧಾನಿಗಳು ಮೌನವಾಗಿದ್ದಾರೆ.

— Siddaramaiah (@siddaramaiah) October 31, 2018

Share This Article
Facebook Whatsapp Whatsapp Telegram
Previous Article MODI KOREAN PRESIDENT ಮೋದಿ ಗಿಫ್ಟ್ ಕೊಟ್ಟಿದ್ದ ಜಾಕೆಟ್ ಧರಿಸಿ, ಸಂಭ್ರಮಿಸಿದ ದ.ಕೊರಿಯಾ ಅಧ್ಯಕ್ಷ
Next Article SMG TARA HDK ಹೋಗ್ಬಿಡ್ತೀನಿ, ಹೋಗ್ಬಿಡ್ತೀನಿ ಅಂತ ಸಿಎಂ ಕುರ್ಚಿಲೀ ಕುತ್ಕೋಂಡು, ಈವಾಗ್ಲೂ ಹೋಗ್ಬಿಡ್ತೀನಿ ಅಂತಾ ಕಣ್ಣೀರು ಹಾಕ್ತಿದ್ದಾರೆ: ತಾರಾ

Latest Cinema News

Jr NTR
ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ
Cinema Latest South cinema Top Stories
Disha Patani 1
ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು
Bollywood Cinema Crime Latest National Top Stories
Samantha
ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?
Cinema Latest South cinema Top Stories
Urfi Javed
ಪ್ರಿಂಟಿಂಗ್ ಮಷಿನ್ ಕಾಸ್ಟ್ಯೂಮ್ ಧರಿಸಿ ಬಂದ ಉರ್ಫಿ – ನನಗೊಂದು ಪ್ರಿಂಟ್‌ ಕೊಡಿ ಅಂದ್ರು ನೆಟ್ಟಿಗರು
Bollywood Cinema Latest TV Shows Uncategorized
Marigallu
ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು
Cinema Latest Sandalwood Top Stories Uncategorized

You Might Also Like

Prostitution
Crime

ಕೊಡಗಿನಲ್ಲಿ ವೇಶ್ಯಾವಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

13 minutes ago
01 5
Big Bulletin

ಬಿಗ್‌ ಬುಲೆಟಿನ್‌ 19 September 2025 ಭಾಗ-1

28 minutes ago
02 6
Big Bulletin

ಬಿಗ್‌ ಬುಲೆಟಿನ್‌ 19 September 2025 ಭಾಗ-2

30 minutes ago
Kukke Subramanya
Bengaluru City

ರಾಜ್ಯದ 9 ಮುಜರಾಯಿ ದೇಗುಲಗಳ ಸೇವಾಶುಲ್ಕ ಏರಿಕೆ – ಅ.1ರಿಂದ ಜಾರಿ

33 minutes ago
Dunith Wellalage
Cricket

ಏಷ್ಯಾ ಕಪ್‌ | ಪಂದ್ಯ ನಡೆಯುತ್ತಿದ್ದಾಗ ಲಂಕಾ ಆಟಗಾರನ ತಂದೆ ನಿಧನ

1 hour ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?