ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

Public TV
1 Min Read
dead bodies at railway track

ಭುವನೇಶ್ವರ: ಒಂದೇ ಕುಟುಂಬದ ಐವರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಧರಣಿಧರ್ ಪಾಂಡ, ಪತ್ನಿ ಸಂಗೀತಾ, ಮಕ್ಕಳಾದ ಅಪರಾಜಿತಾ, ಅನನ್ಯಾ ಮತ್ತು ಸಿದ್ಧಿ ಸಾವನ್ನಪ್ಪಿದ ದುರ್ದೈವಿಗಳು. ಅನನ್ಯ 12ನೇ ತರಗತಿಯಲ್ಲಿ ಮತ್ತು ಸಿದ್ಧಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಮೂಲತಃ ಬರ್‍ಗಢ ಜಿಲ್ಲೆಯ ಬುರುಡಾದವರಾದ ಧರಣಿಧರ್, ಮದನಬತಿ ಪಬ್ಲಿಕ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜಗನ್ನಾಥ್ ಕಾಲೋನಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

railway track

ಬಾಡಿಗೆ ನೀಡಲು ಹಣವಿರಲಿಲ್ಲ: ಧರಣಿಧರ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಅವರು ವಾಸವಿದ್ದ ಮನೆ ಧರಣಿಧರ ಅವರ ಸ್ನೇಹಿತರದ್ದು. ಮನೆಯ ಬಾಡಿಗೆಯನ್ನು ನೀಡಲು ಅವರ ಬಳಿ ಹಣ ಇರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಆಗಿದ್ದೇನು?: ಮಂಗಳವಾರ ರಾತ್ರಿ ಸುಮಾರು 8.30ಕ್ಕೆ ಐವರು ಸಂಬಲ್‍ಪುರ-ಝಾರ್‍ಸುಗುದಾ ಡಿಎಂಯು ರೈಲು ಬರುವಾಗ ಅದರ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ರೈಲ್ವೆ ಚಾಲಕ ಘಟನೆ ಬಗ್ಗೆ ಜಿಆರ್‍ಪಿ (ಸರ್ಕಾರಿ ರೈಲ್ವೆ ಪೊಲೀಸ್)ಗೆ ಮಾಹಿತಿ ನೀಡಿದ್ದರು. ಬಳಿಕ ಜಿಆರ್‍ಪಿ ಮತ್ತು ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಶವಗಳನ್ನ ಅಲ್ಲಿಂದ ತೆರವುಗೊಳಿಸಿದ್ದಾರೆ.

Sambalpur

ಮೃತ ದೇಹಗಳನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಸಾಮೂಹಿಕ ಆತ್ಮಹತ್ಯೆ ಎಂದು ಕಾಣಿಸುತ್ತಿದೆ ಎಂದು ಜಿಆರ್‍ಪಿ ಅಧಿಕಾರಿ ಜಿ.ಡುಂಗ್ ಡುಂಗ್ ತಿಳಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಈ ಕುರಿತು ಸತ್ಯ ತಿಳಿಯಲು ಸರಿಯಾದ ತನಿಖೆ ನಡೆಯಬೇಕು ಎಂದು ಸಂಬಲ್‍ಪುರ ಶಾಸಕಿ ರಾಸೇಶ್ವರಿ ಪನಿಗ್ರಾಹಿ ಹೇಳಿದ್ದಾರೆ .

https://www.youtube.com/watch?v=1JN7f-KKvzc

Share This Article
Leave a Comment

Leave a Reply

Your email address will not be published. Required fields are marked *