ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

Public TV
1 Min Read
Fish Curry

ಗಾಂಧಿನಗರ: ಫಿಶ್ ಕರಿಗಾಗಿ ಗೆಳಯನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ರಂಜಿತ್ ಕುನ್ವರಿಯ (32) ಮೃತನಾಗಿದ್ದಾನೆ. ಫಿಶ್ ಕರಿಗಾಗಿ ನಡೆದ ಗಲಾಟೆಯಲ್ಲಿ ಆತನನ್ನು ಕಾರಿನ ಕೆಳಗೆ ಹಾಕಿ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಮಲಿಯ ಮಿಯಾನ ತಾಲೂಕಿನ ವೆನಸರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

fish curry 3

ರಂಜಿತ್ ಕುನ್ವರಿಯ, ಆತನ ಕಸಿನ್‍ಗಳಾದ ಅಶೋಕ್, ಸುನಿಲ್, ಪ್ರಕಾಶ್ ಡ್ರಿಂಕ್‍ಪಾರ್ಟಿಯೊಂದಕ್ಕೆ ಹೋಗಿದ್ದರು. ಈ ವೇಳೆ ನದಿಯಲ್ಲಿ ಫಿಶಿಂಗ್‍ಗೆ ಹೋಗಿದ್ದರು. ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

Fish Curry

ಫಿಶ್ ಕರಿ, ಅನ್ನ ಮಾಡಿಕೊಂಡು ಭರ್ಜರಿಯಾಗಿ ಊಟ ಮಾಡಲು ಎಲ್ಲ ರೆಡಿ ಮಾಡಿಕೊಂಡರು. ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಮಾಡಿದ್ದಾನೆ. ಸಂದೀಪ್ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಈ ಅವಮಾನದಿಂದ ಸಂದೀಪ್‍ನ ಸೋದರ ಸುನಿಲ್‍ಗೆ ಬಹಳ ಕೋಪ ಬಂದು ಅಲ್ಲಿಂದ ಎದ್ದು ಹೋದ. ಆತ ಮನೆಗೆ ವಾಪಾಸ್ ಹೋಗುತ್ತಿರಬಹುದು ಎಂದು ಗೆಳೆಯರೆಲ್ಲ ಅಂದುಕೊಂಡರು. ಆದರೆ ಕೋಪದಿಂದ ಕಾರು ಸ್ಟಾರ್ಟ್ ಮಾಡಿದ ಸುನಿಲ್ ರಂಜಿತ್‍ನನ್ನು ಕಾರಿನ ಕೆಳಗೆ ಬೀಳಿಸಿ ಆತನ ಮೇಲೆ ಕಾರು ಹತ್ತಿಸಿದ. ಇದರಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಸುನಿಲ್ ಅಲ್ಲೇ ಕಾರನ್ನು ಬಿಟ್ಟು ಓಡಿಹೋಗಿದ್ದಾನೆ. ಸುನಿಲ್ ವಿರುದ್ಧ ಕೇಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *