ಚಿಕ್ಕಮಗಳೂರು: ಸಂಕ್ರಾಂತಿಯ (Makar Sankranti) ಮುನ್ನಾ ದಿನ ಕಾಫಿನಾಡಲ್ಲಿ (Chikkamagaluru) ವರ್ಷದ ಮೊದಲ ಮಳೆ (Rain) ಸುರಿದಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ (Kottigehara) ಸುತ್ತಮುತ್ತ ಸೋಮವಾರ ರಾತ್ರಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ದಿಢೀರ್ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕೊಟ್ಟಿಗೆಹಾರ, ಬಾಳೂರು, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಮಳೆ ಸುರಿದಿದೆ. ಇದನ್ನೂ ಓದಿ: Delhi Election| ಮೋದಿಯಂತೆ ಕೇಜ್ರಿವಾಲ್ ಸುಳ್ಳು ಹೇಳುತ್ತಾರೆ: ರಾಹುಲ್ ಕಿಡಿ
ಮಲೆನಾಡು ಭಾಗದಲ್ಲಿ ಈಗ ಕಾಫಿ ಕೊಯ್ಯಲಾಗುತ್ತಿದೆ. ಈ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ.
ಮಂಗಳವಾರ ಮೈಸೂರು, ಮಂಡ್ಯ, ಕೊಡಗು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.