ಉಡುಪಿ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಮಿನಿಸ್ಟರ್ ಪಟ್ಟ ಒಲಿದಿದ್ದು, ಇಂದು ಬೆಳಗ್ಗೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೆ ಮಿನಿಸ್ಟರ್ ಕೋಟ ಅವರ ಮಕ್ಕಳು ಅಪ್ಪನಲ್ಲಿ ಮೊದಲ ದಿನವೇ ತಮ್ಮ ಮೊದಲ ಬೇಡಿಕೆ ಒಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಶಾಂತ, ರಾತ್ರಿ 11.30ಕ್ಕೆ ಸಿಎಂ ಯಡಿಯೂರಪ್ಪ ಅವರು ಫೋನ್ ಮಾಡಿದ್ದರು. ಆಗ ನಮಗೆ ವಿಷಯ ಗೊತ್ತಾಗಿದೆ. ಕಳೆದ ಬಾರಿ ಮಾಡಿದಷ್ಟೇ ಕೆಲಸ ಈ ಬಾರಿಯೂ ಮಾಡಬೇಕು. ಕಷ್ಟದಲ್ಲಿರುವ ಜನರ ಸಮಸ್ಯೆ ಬಗೆಹರಿಸಿ, ಜನರ ಬೇಡಿಕೆ ಈಡೇರಿಸಲಿ ಎಂದು ಹಾರೈಸಿದರು.
ಮಕ್ಕಳಾದ ಶ್ರುತಿ ಮತ್ತು ಸ್ವಾತಿ ಖುಷಿ ವ್ಯಕ್ತಪಡಿಸಿದ್ದು, ಅಪ್ಪ ಯೂತ್ಗೆ ಏನಾದ್ರು ಮಾಡಬೇಕು. ಯುವಕರ ಶಿಕ್ಷಣಕ್ಕೆ ಸಹಾಯ ಆಗುವ ಕೆಲಸ ಮಾಡಲಿ. ಎಜುಕೇಶನ್ಗೆ ಸಂಬಂಧಪಟ್ಟ ಹಲವು ಕೆಲಸ ಮಾಡಲಿ ಎಂದು ಅಪ್ಪನಲ್ಲಿ ಬೇಡಿಕೆ ಇಟ್ಟಿದ್ದಾರೆ.