ಪ್ರತಿಭಟನೆಯಲ್ಲಿ ಟೈರ್ ಒದೆಯಲು ಹೋಗಿ ಕಾರ್ಯಕರ್ತನ ಕಾಲಿಗೆ ತಗುಲಿದ ಬೆಂಕಿ!

Public TV
1 Min Read
DWD FIRE COLLAGE

ಧಾರವಾಡ: ಬಂದ್ ಪ್ರತಿಭಟನೆಯಲ್ಲಿ ಟೈರ್ ಗೆ ಬೆಂಕಿ ಹಚ್ಚುವ ವೇಳೆ ಕಾರ್ಯಕರ್ತನ ಕಾಲಿಗೆ ಆ ಬೆಂಕಿ ತಗುಲಿದ ಘಟನೆ ನಗರದ ಜ್ಯೂಬಿಲಿ ಸರ್ಕಲ್‍ನಲ್ಲಿ ನಡೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡದ್ದಕ್ಕೆ ಬಿಜೆಪಿ ಇಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಬಸವರಾಜ್ ಇಂದೂರ ಹೊತ್ತಿ ಉರಿಯುತ್ತಿದ್ದ ಟೈರ್ ಗೆ ಒದೆಯಲು ಹೋಗಿ ಬಲಗಾಲಿಗೆ ಬೆಂಕಿ ತಗುಲಿದೆ.

ಬೆಂಕಿ ಹತ್ತಿದ್ದ ಕೂಡಲೇ ಬಸವರಾಜು ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರು ಆ ಬೆಂಕಿ ನಂದಿಸಿದ್ದಾರೆ. ಟೈರ್ ಗೆ ಪೆಟ್ರೋಲ್ ಹಾಕುವಾಗ ಈ ಘಟನೆ ನಡೆದ ನಂತರ ಪೊಲೀಸರು ಆ ಟೈರ್ ಗಳನ್ನು ಅಲ್ಲಿಂದ ತೆರವುಗೊಳಿಸಿದರು.

DWD FIRE

Share This Article
Leave a Comment

Leave a Reply

Your email address will not be published. Required fields are marked *