ದನದ ಕೊಟ್ಟಿಗೆಯಲ್ಲಿ ಬೆಂಕಿ- ಜಾನುವಾರುಗಳು ಸಜೀವ ದಹನ

Public TV
0 Min Read
ckd fire

ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಜಾನುವಾರುಗಳು ಸಜೀವ ದಹನವಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.

ckd fire 2

ಎಮ್ಮೆ, ಆಕಳು, ಆಡು ಸೇರಿದಂತೆ ಸುಮಾರು 5 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ. ದತ್ತಾ ಸೂರ್ಯವಂಶಿ ಎಂಬವರಿಗೆ ಸೇರಿದ ಜಾನುವಾರುಗಳು ಇವಾಗಿವೆ. ಸೋಮವಾರ ರಾತ್ರಿ ಸಮಯದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ತೋಟದಲ್ಲಿ ಪ್ರದೇಶದಲ್ಲಿ ದನದ ಕೊಟ್ಟಿಗೆ ಇರುವುದರಿಂದ ಘಟನೆ ಯಾರಿಗೂ ತಿಳುದುಬಂದಿಲ್ಲ. ಹೀಗಾಗಿ ಮೂಕಪ್ರಾಣಿಗಳು ಸಾವನ್ನಪ್ಪಿವೆ.

ckd fire 3

ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ckd fire 1

ckd fire 4

Share This Article
Leave a Comment

Leave a Reply

Your email address will not be published. Required fields are marked *