ಉಡುಪಿ: ಯಾವುದೋ ಊರು, ಯಾವುದೋ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು ಎಂದು ಉಡುಪಿ ಪರ್ಯಾಯ ಮಠಾಧೀಶ ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.
ಎರಡು ವರ್ಷದ ಪರ್ಯಾಯ ಪೂಜಾಧಿಕಾರ ಬಿಟ್ಟುಕೊಡಲು ಒಂದು ವಾರ ಬಾಕಿಯಿದ್ದು, ಈ ಕುರಿತು ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸ್ವಾಮೀಜಿ ಮಾತನಾಡಿದ್ದು, ನಮ್ಮ ಊರಿನ ಸಂಸ್ಕೃತಿ ಉಳಿಯಲು ನಾವೇ ಉದ್ಯೋಗ ಸೃಷ್ಟಿ ಮಾಡಬೇಕು. ಯಾವುದೋ ಊರು, ಯಾವುದೋ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು. ಕುಟುಂಬ ಬಳಗದ ಜೊತೆ ಯುವ ಜನಾಂಗ ಇರಬೇಕಾದ ಅನಿವಾರ್ಯತೆ ಇದೆ ಎಂದರು. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
ಕೋವಿಡ್-19 ಎರಡು ವರ್ಷ ಸಾಕಷ್ಟು ಪಾಠ ಕಲಿಸಿದೆ. ಕೊರೊನಾ ಹೇಳಿಕೊಟ್ಟ ಸ್ವಾವಲಂಬಿ ಪಾಠ ನಿರಂತರ ಜೀವನದಲ್ಲಿ ಪಾಲಿಸೋಣ. ನಮ್ಮ ಊರು, ನಮ್ಮ ಜನರ ಕಾಳಜಿ ವಹಿಸೋಣ ಎಂದು ಸಂದೇಶ ನೀಡಿದರು.
ಕೃಷ್ಣ ಮಠದ ಆವರಣ ಬದಲಾವಣೆ ಮಾಡಿದ್ದೇವೆ. ಶುಚಿತ್ವ ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಆ ನಿಟ್ಟಿನಲ್ಲಿ ಎರಡು ವರ್ಷ ಪ್ರಯತ್ನ ಮಾಡಿದ್ದೇವೆ. ಜನರಲ್ಲಿ ಸಾಕಷ್ಟು ಬದಲಾವಣೆ ನೋಡಿದ್ದೇವೆ. ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಿದ್ದೇವೆ ಎಂದರು.
ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದು, ನೋಡಿ ಉತ್ತಮವಾದದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ. ಅದಮಾರು ಮಠದ ಎರಡು ವರ್ಷದ ಪರ್ಯಾಯ ಸಂದರ್ಭದಲ್ಲಿ ಮಾಧ್ಯಮ ಚೆನ್ನಾಗಿ ಕೆಲಸ ಮಾಡಿದೆ. ಮಠದ ಅಭಿಪ್ರಾಯ ಜನಕ್ಕೆ ಮುಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದನ್ನೂ ಓದಿ: ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು
ಎರಡು ವರುಷಗಳ ಹಿಂದೆ ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಯಾವುದೇ ಸಂಕಲ್ಪ ಮಾಡಿರಲಿಲ್ಲ. ಕಾಲ ಕಾಲಕ್ಕೆ ಆಗಬೇಕಾದ ಕೆಲಸ ಮಾಡಿದ್ದೇವೆ. ಎಲ್ಲವೂ ಕೃಷ್ಣನ ಪಾದಕ್ಕೆ ಸಲ್ಲಿಕೆಯಾಗಿದೆ ಎಂದರು.