6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

Public TV
1 Min Read
nirmala sitharaman

ನವದೆಹಲಿ: ದೇಶದ ಆರ್ಥಿಕತೆ ಕ್ರೋಢೀಕರಣಕ್ಕೆ ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ. ಕಡಿಮೆ ಬಳಕೆಯಾದ ಸ್ವತ್ತುಗಳ ಮಾರಾಟದಿಂದ 6 ಲಕ್ಷ ಕೋಟಿ ರೂ. ಸಂಪತ್ತು ಸಂಗ್ರಹಕ್ಕೆ ಕೇಂದ್ರ ಸರ್ಕಾರ ನ್ಯಾಷನಲ್ ಮ್ಯಾನಿಟೈಸೇಷನ್ ಪೈಪ್‍ಲೈನ್(ಎನ್‍ಎಂಪಿ) ಯೋಜನೆ ಘೋಷಿಸಿದೆ.

ಎನ್‍ಎಂಪಿಯನ್ನು ಅನಾವರಣಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ 4 ವರ್ಷದಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಗ್ಯಾಸ್ ಪೈಪ್‍ಲೈನ್‍ಗಳನ್ನು ಖಾಸಗಿ ಬಳಕೆಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಅಫ್ಘಾನ್‍ನಿಂದ ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ 

National Monetisation Pipeline India Privatisation

ಖಾಸಗಿಯವರಿಗೆ ನೀಡಿದರೂ ಮಾರಾಟ ಮಾಡುವುದಿಲ್ಲ. ಒಡೆತನ ಸರ್ಕಾರದ ಸ್ವಾಧೀನದಲ್ಲೇ ಇರುತ್ತದೆ. ಖಾಸಗೀಕರಣದಿಂದ ಬರುವ ಹಣವನ್ನು ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರಕ್ಕೆ ಬಳಸಲಾಗುತ್ತದೆ ಎಂದು ಹೇಳಿದರು. ಈ ಎನ್‍ಎಂಪಿ ಪ್ರಕಾರ 160 ಕಲ್ಲಿದ್ದಲು ಗಣಿ, 25  ವಿಮಾನ ನಿಲ್ದಾಣ,  15 ರೈಲ್ವೇ ಸ್ಟೇಡಿಯಂಗಳನ್ನು ಖಾಸಗಿ ಬಳಕೆಗೆ ನೀಡಲಾಗುತ್ತಿದೆ. ಇದನ್ನೂ ಓದಿ:  ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಕೇಂದ್ರ ಸರ್ಕಾರ 2021-22ರ ಹಣಕಾಸು ಬಜೆಟ್‍ನಲ್ಲಿ ಎನ್‍ಎಂಪಿ ಜಾರಿ ಮಾಡುವುದಾಗಿ ಘೋಷಿಸಿತ್ತು. ಈಗ ತನ್ನ ಘೋಷಣೆಯನ್ನು ಜಾರಿ ಮಾಡಲು ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *