ಕೊನೆಗೂ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆದ ಕೆಪಿಸಿ ಅಧಿಕಾರಿಗಳು

Public TV
1 Min Read
raichur dam

ರಾಯಚೂರು: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆಯುವಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಇಂಜಿನಿಯರ್‌ಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ಅನ್ನು ತೆರೆಯಲು 4 ದಿನಗಳಿಂದ ಸತತ ಪ್ರಯತ್ನ ನಡೆಸಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಒಂದು ಗೇಟನ್ನು ಸಹ ತೆಗೆಯಲು ಸಾಧ್ಯವಾಗಿರಲಿಲ್ಲ. ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಗೇಟ್‌ಗಳನ್ನು ತೆಗೆಯಲಾಗುತ್ತಿದೆ. ಇದನ್ನೂ ಓದಿ: ವಾಜಪೇಯಿಗೆ ಬಿಜೆಪಿ ಸರ್ಕಾರದಿಂದ ಅಗೌರವ – ಅಟಲ್ ಸಾರಿಗೆ ಸ್ಥಗಿತ: ಎಎಪಿ ಖಂಡನೆ

raichur 4

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರಿನ ಹೊರಹರಿವು ಇಳಿಕೆಯಾಗಿದ್ದರಿಂದ ಗೇಟ್‌ಗಳನ್ನು ಮೇಲೆ ಎತ್ತಲು ಸಾಧ್ಯವಾಗಿದೆ. ಸದ್ಯ ಕೃಷ್ಣಾ ನದಿಗೆ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಪ್ರವಾಹ ಭೀತಿ ತಗ್ಗಿದೆ. ಇದನ್ನೂ ಓದಿ: ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

raichur 3

ಕೆಪಿಸಿ ಇಂಜಿನಿಯರ್‌ಗಳ ಯಡವಟ್ಟಿನಿಂದಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆಗೆಯಲು ಆಗಿರಲಿಲ್ಲ. ಹೀಗಾಗಿ ಪ್ರವಾಹ ಭೀತಿ ಎದುರಾಗಿತ್ತು. ಕೊನೆಗೂ 4 ದಿನಗಳ ಬಳಿಕ ಗೇಟ್‌ಗಳನ್ನು ತೆಗೆಯಲು ಸಾಧ್ಯವಾಗಿದೆ. 194 ಗೇಟ್‌ಗಳಲ್ಲಿ 90 ಗೇಟ್ ಮಾತ್ರ ತೆರೆಯಲಾಗಿತ್ತು. ಈಗ ನೀರಿನ ಹೊರಹರಿವಿನ ಆಧಾರದ ಮೇಲೆ ಉಳಿದ ಗೇಟ್‌ಗಳನ್ನು ತೆಗೆಯಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *