ಮೈಸೂರು: ಜೆಡಿಎಸ್ – ಕಾಂಗ್ರೆಸ್ ನಡುವೆ ದೋಸ್ತಿ ಮೂಡಿ ಸರಕಾರವೇನೋ ರಚನೆ ಆಗಿದೆ. ಆದರೆ ತಳ ಮಟ್ಟದ ಸಂಘಟನೆಯಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ದೋಸ್ತಿಯ ಮಾತಿರಲಿ ಕನಿಷ್ಟ ಪಕ್ಷದ ಸೌಹಾರ್ದತೆಯೂ ಮೂಡಿಲ್ಲ ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಸಾಕ್ಷಿ ಸಿಕ್ಕಿದೆ.
ಪಿರಿಯಾಪಟ್ಟಣದ ಬೆಳ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಮಹದೇವು ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಕೆ. ವೆಂಕಟೇಶ್ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ರಸ್ತೆಯ ಶಂಕು ಸ್ಥಾಪನೆ ವಿಚಾರವಾಗಿ ಈ ಜಟಾಜಟಿ ನಡೆದಿದೆ.
ಶಂಕುಸ್ಥಾಪನೆಯಾಗಿದ್ದ ಕಾಮಗಾರಿಗೆ ಶಾಸಕ ಮಹದೇವು ಮತ್ತೆ ಚಾಲನೆ ಮಾಡಲು ಮುಂದಾಗಿದ್ದಾರೆ ಎಂದು ಸಮಾರಂಭಕ್ಕೆ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರು ಅಡ್ಡಿ ಪಡಿಸಿದರು. ಮಾಜಿ ಶಾಸಕರ ಬೆಂಬಲಿಗರು ಶಾಸಕ ಮಹದೇವ್ ಗೆ ತೀವ್ರವಾಗಿ ತರಾಟೆ ತೆಗೆದು ಕೊಂಡು ಗದ್ದಲ ನಡೆಸಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ಕೂಡ ನಡೆದಿದ್ದು, ಮಾಜಿ ಶಾಸಕರ ಬೆಂಬಲಿಗರ ಮನವೊಲಿಸಲು ಶಾಸಕರ ಕೈಯಲ್ಲಿ ಆಗದೆ ಕೆಲ ಕಾಲ ಮೌನವಾಗಿಯೇ ಕುಳಿತು ಬಿಟ್ಟದ್ದಾರೆ.
ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.youtube.com/watch?v=lNxXuLGhwcU