ಗುರೂಜಿಯನ್ನ ತಳ್ಳಿದ್ರಾ ಉದಯ್? ಬಿಗ್ ಬಾಸ್ ಮನೆಯಲ್ಲಿ ಬಿಗ್ ವಾರ್

Public TV
1 Min Read
udaya surya

ಬಿಗ್ ಬಾಸ್ ಓಟಿಟಿ ಶುರುವಾಗಿ ಪ್ರೇಕ್ಷಕರ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಕಾರ್ಯಕ್ರಮ ಶುರುವಾಗಿ ಒಂದು ವಾರ ಕಳೆದಿಲ್ಲ. ಅಷ್ಟರಲ್ಲೇ ಸ್ಪರ್ಧಿಗಳ ಶುರುವಾಗಿದೆ. ಇದೀಗ ಆರ್ಯವರ್ಧನ್ ಜತೆ ಉದಯ್ ಸೂರ್ಯ ಜಗಳ ಮಾಡಿಕೊಂಡಿದ್ದಾರೆ. ಗುರೂಜಿ ಅವರನ್ನ ಉದಯ್ ತೆಳ್ಳಿದ್ದಾರೆ ಎಂಬ ಆರೋಪ ಬಿಗ್ ಬಾಸ್ ಮನೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ.

big boss ott 2ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಆರ್ಯವರ್ಧನ್ ಗುರೂಜಿ. ಟ್ರೋಲ್ ಆಗುತ್ತಾ ಅವರು ಸದಾ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಆರ್ಯವರ್ಧನ್ ಹೈಲೈಟ್ ಆಗ್ತಿದ್ದಾರೆ. ಶೋನಲ್ಲಿ ತಮ್ಮ ಕುಟುಂಬದ ಆಸ್ತಿ 5000 ಕೋಟಿ ರೂಪಾಯಿ ಎಂದು ಹೇಳಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗ ಉದಯ್ ಸೂರ್ಯ ಹಾಗೂ ಗುರೂಜಿ ಮಧ್ಯೆ ಕಿರಿಕ್ ಆಗಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

udaya suryaಪ್ರತಿ ತಂಡದ ಒಂದು ಸದಸ್ಯ ಸ್ಟೂಲ್ ಮೇಲೆ ನಿಂತು ತಿರುಗುವ ಕಂಬಿಯಿಂದ ಪಾರಾಗಬೇಕು. ಈ ಟಾಸ್ಕ್ ನಡೆಯುವಾಗ ಗುರೂಜಿ ತಳ್ಳಿರುವ ಆರೋಪವನ್ನು ಉದಯ್ ಸೂರ್ಯ ಎದುರಿಸುತ್ತಿದ್ದಾರೆ. ಈ ಜಗಳ ಈಗ ಮಾತು ದೊಡ್ಡ ಮಟ್ಟಕ್ಕೆ ತಿರುಗಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಗುರೂಜಿಗೆ ಕೋಪ ನೆತ್ತಿಗೇರಿದೆ. ನಾನು ತಳ್ಳಿದ್ರೆ ನೀನು ೨೫ ಅಡಿ ದೂರ ಹೋಗಿ ಬೀಳ್ತೀಯಾ ಎಂದು ಉದಯ್‌ಗೆ ಗುರೂಜಿ ಎಚ್ಚರಿಕೆ ನೀಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಮಬುದು ಸದ್ಯದ ಕುತೂಹಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *