ಟಿವಿ ನೋಡುವ ವಿಚಾರಕ್ಕೆ ಮಗನ ಗಲಾಟೆ- ತಂದೆಯ ಮೇಲೆಯೇ ಮಾರಣಾಂತಿಕ ಹಲ್ಲೆ

Public TV
1 Min Read
nelamangala govt hospital

ಬೆಂಗಳೂರು: ಪಾಪಿ ಮಗ ವೃದ್ಧ ತಂದೆಯನ್ನು ದೊಣ್ಣೆಯಿಂದ ಬಡಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ನಡೆದಿದೆ.

ಸಂಜೆ ಟಿವಿ ನೋಡುತ್ತಿದ್ದ ವೃದ್ಧ ತಂದೆ ರಾಜಣ್ಣ(65) ಮೇಲೆ ಮಗ ನಾಗರಾಜು ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ಕೆಲಸ ಮಾಡದೆ ಟಿವಿ ನೋಡುತ್ತಿದ್ದಿಯಾ ಎಂದು ಕ್ಯಾತೆ ತಗೆದು ದೊಣ್ಣೆಯಿಂದ ಬಡಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ರಾಜಣ್ಣ ಆರೋಪಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

ರಾಜಣ್ಣ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳೀಯರು ನೆಲಮಂಗಲ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದ್ದಿದ್ದು, ಆರೋಪಿ ಮಗ ನಾಗರಾಜು ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *