ವಿಜಯಪುರ: ಆಸ್ತಿ ಹಣಕ್ಕಾಗಿ ಹೆತ್ತ ತಂದೆಯನ್ನೆ ಮಗ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ತಾಲೂಕಿನ ಬೂತನಾಳ ತಾಂಡಾದ ನಿವಾಸಿ ತೇವು ಚವ್ಹಾಣ ಎಂಬವರೇ ಮಗನಿಂದಲೆ ಕೊಲೆಯಾದ ದುರ್ದೈವಿ. ಮೋಹನ್ ಚವ್ಹಾಣ ತಂದೆಯನ್ನ ಕೊಲೆಗೈದ ಪಾಪಿ ಮಗ.
ಕಳೆದ ಕೆಲವು ದಿನಗಳ ಹಿಂದೆ ತಂದೆ ತೇವು ಚವ್ಹಾಣ 4 ಎಕರೆ ಜಮೀನು ಮಾರಾಟ ಮಾಡಿದ್ದರು. ಆ ಬಳಿಕದಿಂದ ಜಮೀನು ಮಾರಾಟದ ಹಣಕ್ಕಾಗಿ ಮೋಹನ್ ತಂದೆಯನ್ನು ಪೀಡಿಸುತ್ತಿದ್ದು, ಹಣ ಕೊಡದ ಸಿಟ್ಟಿನಿಂದ ತಂದೆಯನ್ನೇ ಕೊಲೈಗಿದ್ದಾನೆ. ಬಳಿಕ ಕೊಡಲಿ ಸಮೇತ ಮನೆ ಬಳಿ ಮೋಹನ ಕುಳಿತು ಬಿಟ್ಟಿದ್ದನು.
ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೋಹನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.