ಮಡಿಕೇರಿ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ (Father) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ನಂದೇಟಿರ ನಿರನ್ (28) ಸಾವನ್ನಪ್ಪಿದ ಯುವಕ. ನಂದೇಟಿರ ಚಿಟ್ಟಿಯಪ್ಪ (58) ಹತ್ಯೆ ಮಾಡಿದ ಆರೋಪಿ. ದಿನ ನಿತ್ಯ ಕುಡಿತದ ದಾಸನಾಗಿದ್ದ (Drinking Habit) ನಂದೇಟಿರ ನಿರನ್ ತಂದೆಯ ಬಳಿ ಹಣಕ್ಕಾಗಿ ಪಿಡಿಸುತ್ತಿದ್ದ.
ಭಾನುವಾರ ಮಧ್ಯಾಹ್ನ ತಂದೆಯ ಬಳಿ 2 ಸಾವಿರ ರೂ. ಹಣಕ್ಕಾಗಿ ಪಟ್ಟು ಹಿಡಿದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಇದನ್ನೂ ಓದಿ: ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ
ಈ ವೇಳೆ ಸಿಟ್ಟಾದ ತಂದೆ ಚಿಟ್ಟಿಯಪ್ಪ ಮನೆಯಲ್ಲಿ ಇದ್ದ ಕೋವಿಯನ್ನು ತಂದು ಹೆದರಿಸಿದ್ದಾರೆ. ಹೆದರಿಕೆಗೆ ಬಗ್ಗದ ನಿರನ್ ಹಣ ಬೇಕೆಂದು ಹಠ ಹಿಡಿದಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಚಿಟ್ಟಿಯಪ್ಪ ಸಂಜೆ 4 ಗಂಟೆ ವೇಳೆಗೆ ಮಗನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಭೇಟಿ ಪರಿಶೀಲನೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k