ಜಮ್ಶೇಡ್ಪುರ್: ಪೋಷಕರು ಜಗಳವಾಡುವುದನ್ನು ನೋಡಿ ಅವರನ್ನು ತಡೆಯಲು ಹೋದ ಮಗನನ್ನು ತಂದೆಯೇ ಕೊಲೆ ಮಾಡಿದ ಘಟನೆ ಜಾರ್ಖಂಡ್ನ ಜಮ್ಶೇಡ್ಪುರ್ ನಲ್ಲಿ ನಡೆದಿದೆ.
ಗೋವಿಂದೋ ಮುಂಡಾ ಮಗನನ್ನೇ ಕೊಂದ ಆರೋಪಿ ತಂದೆ. ಗೋವಿಂದೋ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದನು. ಆಗ ಬಾಲಕ ಜಗಳವಾಡಬೇಡಿ ಎಂದು ಅವರ ಜಗಳದಲ್ಲಿ ಮಧ್ಯೆ ಪ್ರವೇಶಿಸಿದ್ದನು.
ಇದರಿಂದ ಕೋಪಗೊಂಡ ಗೋವಿಂದೋ ತನ್ನ ಮಗನನ್ನು ತಮುಕ್ಪಾಲ್ ಗ್ರಾಮದಲ್ಲಿ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನನ್ನು ಕೊಂದಿದ್ದಕ್ಕೆ ಗ್ರಾಮಸ್ಥರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.