ಬೆಲೆ ಕುಸಿತ- ರಸ್ತೆ ಬದಿ ಟೊಮೆಟೊ ಸುರಿದು ಹೋದ ರೈತರು

Public TV
0 Min Read
TOMATO PROTEST

ದಾವಣಗೆರೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ಕಂಗಾಲದ ರೈತರು ರಾಶಿಗಟ್ಟಲೇ  ಟೊಮೆಟೊವನ್ನು ರಸ್ತೆಬದಿ ಸುರಿದು ಹೋಗಿದ್ದಾರೆ.

ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹೂಡಿ ಬೆಳೆದ ಟೊಮೆಟೊ ಬೆಳೆಯನ್ನು ನಗರದ ತರಕಾರಿ ಮಾರುಕಟ್ಟೆ ಬಳಿ ಬೀದಿಗೆ ಸುರಿದು ಹೋಗಿದ್ದಾರೆ. ಪ್ರತಿ ಬಾರಿ ನಷ್ಟ ಅನುಭವಿಸುತ್ತಿರುವ ರೈತರು ಕಡಿಮೆ ಬೆಲೆಗೆ ಮಾರುವುದಕ್ಕಿಂತ ಬಿಸಾಕುವದೇ ಮೇಲು ಎಂದು ಈ ರೀತಿ ಮಾಡಿದ್ದಾರೆ.

ಕ್ವಿಂಟಲ್ ಗಟ್ಟಲೇ ಟೊಮೆಟೊ ಬೀದಿ ದನ ಹಾಗೂ ಹಂದಿಗಳ ಪಾಲಾಗಿದೆ. ಬೆಲೆ ಕುಸಿತದಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಕೂಡಲೇ ಸರ್ಕಾರ ನಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದೆ.

vlcsnap 2018 06 25 12h03m11s455

Share This Article
Leave a Comment

Leave a Reply

Your email address will not be published. Required fields are marked *