ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

Public TV
1 Min Read
kalaburagi11 1

ಕಲಬುರಗಿ: ಶೇಂಗಾ ಬಿತ್ತನೆ ಬೀಜದ ಕೊರತೆ ಹಿನ್ನೆಲೆಯಲ್ಲಿ ಬೀಜ ಖರೀದಿಗಾಗಿ ರೈತರು ನೂಕುನುಗ್ಗಲು ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

kalaburagi 13

ತಾಲೂಕಿನ ನಾಲವಾರದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬೀಜ ಖರೀದಿಗಾಗಿ ಮುಗಿಬಿದ್ದರು. ಅಲ್ಲದೆ ಅಧಿಕಾರಿಗಳಿಗೆ ಜಮೀನಿನ ದಾಖಲೆ ನೀಡಿ ಬೀಜ ಖರೀದಿಗೆ ಮುಂದಾದ ಪ್ರಸಂಗ ನಡೆದಿದೆ. ಹಿಂಗಾರಿನ ಬೆಳೆಯಾದ ಶೇಂಗಾಕ್ಕೆ, ಬಿತ್ತನೆ ಬೀಜ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ನೂಕು ನುಗ್ಗಲು ನಡೆದಿದೆ. ಇನ್ನು ಜಿಲ್ಲೆಗೆ ಬೇಕಾದ ಬಿತ್ತನೆ ಬೀಜದಲ್ಲಿ ಕೇವಲ ಅರ್ಧದಷ್ಟು ಬೀಜ ಮಾತ್ರ ಸರ್ಕಾರ ಪೂರೈಕೆ ಮಾಡಿದೆ. ಹೀಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಸಿಗದಂತಾಗಿದೆ. ಇದನ್ನೂ ಓದಿ: ಟೀಚರ್ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

kalaburagi12 1

ಮುಂಗಾರು ಕೈ ಕೊಟ್ಟ ರೈತರಿಗೆ ಹಿಂಗಾರು ಬೀಜದ ಕೊರತೆಯುಂಟಾಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿಪರಿತ ಮಳೆಯ ಹಿನ್ನೆಲೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ ಹಿಂಗಾರು ಬೆಳೆಯಲ್ಲದರೂ ಒಂದಿಷ್ಟು ಹಣ ಸಂಪದಾನೆ ಮಾಡಲು ಅನ್ನದಾತರು ಪರದಾಡುತ್ತಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಬೀಜ ಸಿಗದ ಹಿನ್ನೆಲೆ ರೈತರಿಗೆ ಒಂದರ ಮೇಲೆ ಒಂದು ಹೊಡೆತ ಬಿದ್ದಂತಾಗಿದೆ. ಹಿಂಗಾರು ಬಿತ್ತನೆಗೆ ಸಿದ್ಧಗೊಂಡಿದ್ದ ರೈತರು ಸದ್ಯ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಕಾಯುವಂತಾಗಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

Share This Article
Leave a Comment

Leave a Reply

Your email address will not be published. Required fields are marked *