ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಟಾವಿಗೆ ಬಂದಿದ್ದ ನೂರಾರು ಎಕ್ರೆ ಭತ್ತವನ್ನ ನೆಲಕಚ್ಚುವಂತೆ ಮಾಡಿದೆ.
ಲಿಂಗಸುಗೂರು ಹಾಗೂ ಮಸ್ಕಿಯಲ್ಲಿ ಆಲೆಕಲ್ಲು ಸಹಿತ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಮಸ್ಕಿ ತಾಲೂಕಿನ ಮಾರಲದಿನ್ನಿ, ಕಾಟಗಲ್, ಉಸ್ಕಿಹಾಳ, ಬೆಲ್ಲದಮರಡಿ ಸೇರಿ ಸುತ್ತಮುತ್ತ ಆಲೆಕಲ್ಲು ಸಹಿತ ಮಳೆಯಾಗಿದೆ. ರಾತ್ರಿ ಸುರಿದ ಅಕಾಲಿಕ ಆಲೆಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಮಸ್ಕಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರಿಗೆ ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭತ್ತ ನೆಲಕಚ್ಚಿದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಬೆಳೆ ಹಾನಿಯಾಗಿದ್ದರೆ, ಲಿಂಗಸುಗೂರಿನ ಹಟ್ಟಿ ಸುತ್ತಮುತ್ತ ಮಧ್ಯಾಹ್ನವೇ ಜೋರು ಮಳೆ ಸುರಿದಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರೆದಿದೆ.