ಬೀದರ್: ರೈತರೊಬ್ಬರು ಬೆಳೆಗೆ ಔಷಧಿ ಸಿಂಪರಣೆ ಮಾಡುವ ವೇಳೆ ಹೆಲ್ಮೆಟ್ ಧರಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಔಷಧಿ ಸಿಂಪರಣೆ ವೇಳೆ ಈ ಮಾದರಿ ರೈತ ಹೆಲ್ಮೆಟ್ ಧರಿಸಿ ಇತರರಿಗೂ ಜಾಗೃತಿ ಮೂಡಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ತೋಗರಿ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡುವ ವೇಳೆ ಮುಂಜಾಗ್ರತಾ ಕ್ರಮವಾಗಿ ರೈತ ಚಾಂದಪಾಶಾ ಅವರು ಹೆಲ್ಮೆಟ್ ಧರಿಸಿದ್ದರು.
ಸಮಾಜದಲ್ಲಿ ಅದೆಷ್ಟು ರೈತರು ತಮ್ಮ ಹೊಲಗಳಲ್ಲಿ ಔಷಧಿ ಸಿಂಪಡಿಸುವ ವೇಳೆ ಮುಂಜಾಗ್ರತಾ ಕ್ರಮ ವಹಿಸುವುದಿಲ್ಲ. ಔಷಧಿಯ ಪ್ರಭಾವಕ್ಕೆ ಸಿಲುಕಿ ಆಸ್ಪತ್ರೆಗೆ ಸೇರಿ ಹಲವು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದರು ಯಾರು ಕೇಳುವುದಿಲ್ಲ. ಆದರೆ ಚಾಂದಪಾಶಾ ಅವರು ಔಷಧಿ ಸಿಂಪರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ಐಡಿಯಾ ಕಂಡು ಹಿಡಿದಿದ್ದು, ಬೇರೆ ರೈತರಿಗೂ ಮಾದರಿಯಾಗಿದೆ.