ಬೆಂಗಳೂರು: ರೈತರೊಬ್ಬರು ಸಚಿವರ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ನಗರದ ಕಾವೇರಿ ಭವನದ ಕಚೇರಿಯಲ್ಲಿ ನಡೆಯಿತು.
ಗೃಹ ಮಂಡಳಿಯಿಂದ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬ್ಯಾಲಾಳುವಿನ ರೈತ ಶ್ರೀನಿವಾಸ್ ಎಂಬವರು ಸಚಿವ ಎಂಟಿಬಿ ನಾಗರಾಜ್ ಮುಂದೆ ಅಳಲು ತೋಡಿಕೊಂಡರು. ಹೈ ಕೋರ್ಟ್ ಹೇಳಿದರು ಅಧಿಕಾರಿಗಳು ಹಣ ಕೊಟ್ಟಿಲ್ಲ. ಸಾಲ ಮಾಡಿಕೊಂಡಿದ್ದೇನೆ. ಹಣ ಕೊಡಿಸಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು.
ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸುವಂತೆ ಸಚಿವ ಎಂಟಿಬಿ ನಾಗರಾಜ್ ಅವರು ತಾಕೀತು ಮಾಡಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಗೃಹ ಮಂಡಳಿ ಆಯುಕ್ತರು, ದಾಖಲೆಗಳು ಸರಿಯಾಗಿ ಇಲ್ಲ. ದಾಖಲೆ ತರುವಂತೆ ಸೂಚನೆ ನೀಡಲಾಗಿದೆ. ಗೋಮಾಳದ ಜಾಗ ಇದಾಗಿದ್ದು, ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ದರು ನಾವು ನ್ಯಾಯಾಲಯದಲ್ಲಿ ಹಣ ಡೆಪಾಸಿಟ್ ಮಾಡಿದ್ದೇವೆ. ದಾಖಲೆ ಕೊಟ್ಟು ಅಲ್ಲೇ ಹಣ ಪಡೆಯಬಹುದು ಎಂದು ತಿಳಿಸಿದರು.
ವಸತಿ ಸಚಿವರಾಗಿ ಅಧಿಕಾರವಹಿಸಿಕೊಂಡ ಎಂಟಿಬಿ ನಾಗರಾಜ್ ಅವರು ಮೊದಲ ಬಾರಿಗೆ ವಸತಿ ಇಲಾಖೆಯ ಪರಿಶೀಲನಾ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇಲಾಖೆಯ ಪ್ರಗತಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ನನ್ನ ಅವಧಿಯಲ್ಲಿ ಪಾರದರ್ಶಕವಾಗಿ ಇಲಾಖೆ ನಡೆಸುತ್ತೇನೆ. ಪ್ರಾಮಾಣಿಕವಾಗಿ ಕೊಟ್ಟ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv