ರಾಹುಲ್‌ ವಿರುದ್ಧ ವಿಡಿಯೋ – ಯೂಟ್ಯೂಬರ್‌ ಬಂಧನಕ್ಕೆ ನೋಯ್ಡಾಗೆ ತೆರಳಿ ಬರಿಗೈಯಲ್ಲಿ ಕರ್ನಾಟಕ ಪೊಲೀಸರು ವಾಪಸ್‌

Public TV
3 Min Read
Ajeet Bharti

– ಪತ್ರಕರ್ತ ಅಜಿತ್‌ ಭಾರ್ತಿ ಮನೆ ಮುಂದೆ ಭಾರೀ ಹೈಡ್ರಾಮಾ

ಲಕ್ನೋ: ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದಕ್ಕೆ ಕರ್ನಾಟಕ ಪೊಲೀಸರು (Karnataka Police) ಯೂಟ್ಯೂಬರ್‌ನನ್ನು ಬಂಧಿಸಲು ಉತ್ತರ ಪ್ರದೇಶದ ನೋಯ್ಡಾಕ್ಕೆ ತೆರಳಿದಾಗ ಭಾರೀ ಹೈಡ್ರಾಮಾ ನಡೆದಿದೆ.

ಪತ್ರಕರ್ತ ಅಜಿತ್‌ ಭಾರ್ತಿ (Ajeet Bharti) ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಇಂದು ನೋಟಿಸ್‌ ನೀಡಲು ಮೂವರು ಕರ್ನಾಟಕ ಪೊಲೀಸರು ನೋಯ್ಡಾ ನಿವಾಸಕ್ಕೆ ಆಗಮಿಸಿದ್ದರು. ಅಜಿತ್ ಭಾರ್ತಿ ಮನೆ ಮುಂದೆ ಕಾದ ಕರ್ನಾಟಕದ ಪೊಲೀಸರು ನೋಯ್ಡಾ ಪೊಲೀಸರ ಮಧ್ಯಪ್ರವೇಶದ ಬಳಿಕ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ‌.

ನಡೆದಿದ್ದು ಏನು?
ಅಜಿತ್ ಭಾರ್ತಿ ನಿವಾಸಕ್ಕೆ ತೆರಳಿದ್ದ ಪೊಲೀಸರು ನೋಟಿಸ್ ನೀಡಲು ಆಗಮಿಸಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರನ್ನು ಮನೆಯೊಳಗೆ ಸೇರಿಸದ ಅಜಿತ್ ಭಾರ್ತಿ ಸ್ಥಳಿಯ ಠಾಣೆಗೆ ಮಾಹಿತಿ ನೀಡಿ ಅಕ್ರಮವಾಗಿ ಬಂಧಿಸಲು ಕರ್ನಾಟಕ ಪೊಲೀಸ್ ಆಗಮಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರನ್ನು ಟ್ಯಾಗ್ ಮಾಡಿದ್ದಾರೆ.

ಸ್ಥಳಕ್ಕೆ ಬಂದ ನೋಯ್ಡಾ ಪೊಲೀಸರು ಕರ್ನಾಟಕ ಪೊಲೀಸರನ್ನು ವಿಚಾರಣೆ ನಡೆಸಿದ್ದಾರೆ. ನಮಗೆ ಮಾಹಿತಿ ನೀಡದೇ ಬಂಧಿಸಲು ಆಗಮಿಸಿದ್ದಕ್ಕೆ  ಅಜಿತ್ ಭಾರ್ತಿ ಬಂಧನಕ್ಕೆ ಅನುಮತಿ ನೀಡದೇ ವಾಪಸ್‌ ಕಳುಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಜಿತ್ ಭಾರ್ತಿ, ಗ್ಯಾರಂಟಿ ಯೋಜನೆ ನೀಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ. ಆದರೆ ನನ್ನನ್ನು ಬಂಧಿಸಲು ನೊಯ್ಡಾವರೆಗೂ ಬಂದಿದ್ದಾರೆ. ಇದೊಂದು ಸಣ್ಣ ಪ್ರಕರಣ ಆದರೆ ಬೆದರಿಸುವ ಮೂಲಕ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಧ್ಯಪ್ರವೇಶದ ಮಾಡಿದ ನೊಯ್ಡಾ ಪೊಲೀಸ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಜೈಲುಪಾಲಾದ ಅಮ್ಮನ ಕಂಡು ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ ಮಗಳು

ಕರ್ನಾಟಕ ಪೊಲೀಸರು ಅಜಿತ್‌ ಭಾರ್ತಿಗೆ ನೋಟಿಸ್‌ ನೀಡಿ 7 ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆರಳಿದರು. ಈಗ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಪೊಲೀಸರ ನಡೆಯನ್ನು ಹಲವು ಮಂದಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ಪೊಲೀಸರನ್ನು ಪ್ರಶ್ನಿಸುತ್ತಿರುವ ನೋಯ್ಡಾ ಪೊಲೀಸರು

ಕರ್ನಾಟಕ ಪೊಲೀಸರನ್ನು ಪ್ರಶ್ನಿಸುತ್ತಿರುವ ನೋಯ್ಡಾ ಪೊಲೀಸರು

ಏನಿದು ವಿಡಿಯೋ ವಿವಾದ?
ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಜಿತ್‌ ಭಾರ್ತಿ ಅವರು ಅಯೋಧ್ಯೆಯ ರಾಮ ಮಂದಿರ (Ram Mandir) ನಿರ್ಮಾಣಗೊಂಡ ಜಾಗದಲ್ಲಿ ಬಾಬ್ರಿ ಮಸೀದಿಯನ್ನು (Babri Masjid) ಮರಳಿ ತರುವುದು ರಾಹುಲ್ ಗಾಂಧಿಯವರ ಭವಿಷ್ಯದ ಯೋಜನೆ ಎಂದು ಹೇಳಿದ್ದರು.

ಈ ಹೇಳಿಕೆಯ ಆಧಾರದ ಮೇಲೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿಯಾಗಿರುವ ಬಿಕೆ ಬೋಪಣ್ಣ ಅವರ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 153ಎ ಮತ್ತು 505 (2) ಅಡಿ ಎಫ್‌ಐಆರ್ ದಾಖಲಾಗಿತ್ತು.

Share This Article