ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಉದ್ಯಮಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ಅಚ್ಚರಿಯ ವಿಚಾರಗಳು ಬಯಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಗ್ಯಾಂಗ್ ನಾಟಕದ ವೀಡಿಯೋವೊಂದು ಎಕ್ಸ್ ಕ್ಲೂಸೀವ್ ಆಗಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಚೈತ್ರಾ ಗ್ಯಾಂಗ್ ಮಾಡ್ತಿರುವ ಮೋಸ ಗೊತ್ತಾಗಿ ಗೋವಿಂದ ಬಾಬು ಕೊಟ್ಟ ಹಣವನ್ನು ವಾಪಸ್ ಮಾಡುವಂತೆ ಡಿಮ್ಯಾಂಡ್ ಮಾಡಿದ್ರು. ಹೀಗಾಗಿ ಏಪ್ರಿಲ್ 24ರಂದು ಗೋವಿಂದಬಾಬು ಕಚೇರಿಗೆ ಬಂದ ಚೈತ್ರಾ, ಗಗನ್ ಕಡೂರು ಮತ್ತು ಇತರರು ಮುಂಚಿತವಾಗಿಯೇ ಮಾಡಿದ ಪ್ಲಾನ್ ರೀತಿ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ರು.
ಗೋವಿಂದ ಬಾಬು ಕಚೇರಿಗೆ ಪ್ರಮುಖ ಆರೋಪಿ ಚೈತ್ರಾ, 2ನೇ ಆರೋಪಿ ಗಗನ್ ಕಡೂರು, 7ನೇ ಆರೋಪಿ ಕಿಶೋರ್, 8ನೇ ಆರೋಪಿ ಪ್ರಶಾಂತ್ ಬೈಂದೂರು ಆಗಮಿಸಿ ಸಂಧಾನಕ್ಕೆ ಯತ್ನಿಸಿದ್ರು. ಆದ್ರೆ, ಇದಕ್ಕೆ ಒಪ್ಪದೇ 5 ಕೋಟಿ ಹಣಕ್ಕೆ ಗೋವಿಂದ ಬಾಬು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಖಾಲಿ ವಿಷದ ಬಾಟಲಿಯಲ್ಲಿ ನೀರು ತುಂಬಿಕೊಂಡು, ಅದನ್ನೇ ಕುಡಿದು ಆತ್ಮಹತ್ಯೆಗೆ ಯತ್ನಿಸುವ ರೀತಿ ಗಗನ್ ಕಡೂರು ಡ್ರಾಮಾ ಮಾಡಿದ್ರು.
ಈ ವೇಳೆ ಎ1 ಆರೋಪಿ ಚೈತ್ರಾ, ಗಗನ್ ಜೀವ ರಕ್ಷಣೆ ಮಾಡೋ ರೀತಿ ನಾಟಕ ಮಾಡಿದ್ರು. ಇದೀಗ ಈ ವಿಡಿಯೋ ಸಿಸಿಬಿಗೆ ಪ್ರಬಲ ಸಾಕ್ಷ್ಯವಾಗಲಿದೆ. ಅಂದ ಹಾಗೇ, ಪಬ್ಲಿಕ್ ಟಿವಿ ಜೊತೆ ನಿನ್ನೆ ಮಾತಾಡಿದ್ದ ಗೋವಿಂದ ಬಾಬು ಸಿಬ್ಬಂದಿ ಆರ್ಯ ಎನ್ನುವವರು, ಚೈತ್ರಾ ಗ್ಯಾಂಗ್ ಆತ್ಮಹತ್ಯೆ ಡ್ರಾಮಾ ಮಾಡಿತ್ತು. ಇದಕ್ಕೆ ನಾನೆ ಸಾಕ್ಷಿ ಅಂದಿದ್ರು. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?
ಇಂದು ಬೆಳಗ್ಗೆಯಷ್ಟೇ ಸಿಸಿಬಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದರು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಚ್ಚರಿ ಅಂದ್ರೆ ಚೈತ್ರಾ ಕುಸಿದು ಬಿದ್ದಾಗ ಆಕೆಯ ಬಾಯಲ್ಲಿ ನೊರೆ ಬಂದಿತ್ತು. ಹೀಗಾಗಿ ಆಕೆಗೆ ಪಿಡ್ಸ್ ಬಂದಿರಬಹುದು ಎಂದು ಊಹಿಸಲಾಗಿತ್ತು. ಆದರೆ ಮೂರ್ಛೆ ರೋಗ ಅಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲೆ ಆಸೀಮಾ ಬಾನು ಹೇಳಿದ್ದರು.
Web Stories