ಬೆಂಗಳೂರು: ಜಮ್ಮು – ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಕುಟುಂಬಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೆಸರಿನಲ್ಲಿರುವ ಅರ್ಧ ಎಕರೆ ಜಮೀನನ್ನು ಕೊಡುತ್ತೇನೆ ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ವೀರ ಯೋಧರು ಎಂದರೆ ನಮ್ಮನ್ನು ಸುರಕ್ಷಿತವಾಗಿ ಇರಿಸುವುದಕ್ಕೆ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಅಂತಹವರು ನಮ್ಮ ಊರಿನಲ್ಲಿ ನಮ್ಮ ಮಂಡ್ಯದ ಅದು ಅಂಬರೀಶ್ ಅವರ ಊರಾದ ದೊಡ್ಡ ಅರಿಸಿಕೆರೆನವರು ವೀರಮರಣ ಹೊಂದಿದ್ದಾರೆ ಎಂದರೆ ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ತಂದೆ, ತಾಯಿ ಮಾತನಾಡುವುದನ್ನು ನೋಡಿ ನನಗೆ ತುಂಬಾ ನೋವಾಯಿತು. ಆ ನೋವಿನ ಬಗ್ಗೆ ಏನೂ ಹೇಳಬೇಕು ಎಂದು ಗೊತ್ತಾಗಲ್ಲ. ಅವರು ಮಾಡಿದ ತ್ಯಾಗ ಹಾಗೂ ಸೇವೆಗೆ ನಾವು ಏನೂ ಕೊಡಲು ಸಾಧ್ಯವಿಲ್ಲ. ಶೇ.100 ಇದು ಶೇ.1 ಕೂಡ ಅಲ್ಲ ಎಂದರು.
ಇದು ಏನೂ ಇಲ್ಲ. ನಮ್ಮ ತೃಪ್ತಿಗೆ ಜಮೀನು ನೀಡುತ್ತಿದ್ದೇವೆ. ಈ ಸಂದರ್ಭದಲ್ಲಿ ಅಂಬರೀಶ್ ಅವರು ಇದ್ದರೆ ಅವರು ಕೂಡ ಈ ಕೆಲಸ ಮಾಡುತ್ತಿದ್ದರು. ಇದರಿಂದ ಅಂಬಿ ಅವರ ಆತ್ಮಕ್ಕೆ ಶಾಂತಿ ಸಿಗಬಹುದು ಎಂದುಕೊಂಡಿದ್ದೇನೆ. ನಾನೂ ಹಾಗೂ ಅಭಿ ಈಗ ಮಲೇಶಿಯಾದಲ್ಲಿದ್ದೇವೆ. ಭಾರತಕ್ಕೆ ಬಂದ ಮೇಲೆ ಇಬ್ಬರು ಯೋಧನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲು ಪ್ರಯತ್ನಿಸುತ್ತೇವೆ.
ಅವರಿಗೆ ಧೈರ್ಯ ಹೇಳುವ ಮೊದಲು ನಾವು ಧೈರ್ಯ ತೆಗೆದುಕೊಳ್ಳಬೇಕು. ಏಕೆಂದರೆ ಈ ಕಷ್ಟ ಏನು ಎಂದು ಅನುಭವಿಸಿದವರಿಗೆ ಗೊತ್ತು ಎಂದು ಸುಮಲತಾ ಅವರು ಹೇಳಿದರು.
ರಾಜಕೀಯ ಪಕ್ಕದಲ್ಲಿ ಇಟ್ಟು ದೇಶಕ್ಕಾಗಿ ಏನಾದರು ಮಾಡುವ ಸಮಯ ಇದು. ಆ ಕುಟುಂಬಕ್ಕೆ ಧೈರ್ಯ ಹೇಳುವ ಮೊದಲು ನಾವು ಧೈರ್ಯ ತುಂಬಿಕೊಳ್ಳಬೇಕು. ಅವರ ನೋವನ್ನು ನಾವು ತುಂಬಲು ಆಗುವುದಿಲ್ಲ. ಆದರೆ ಅವರ ನೋವನ್ನು ನಾವು ಹಂಚಿಕೊಳ್ಳಬಹುದು. ನಮ್ಮ ಕೈಯಲ್ಲಿ ಆದಷ್ಟು ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂಬುದು ನನ್ನ ಉದ್ದೇಶ. ಅವರು ಸ್ಮಾರಕ ಕಟ್ಟುತ್ತಾರೆ ಎಂದರೆ ಅಂಬರೀಶ್ ಹಾಗೂ ಅಭಿ ಪರವಾಗಿ ಅದೇ ಊರಿನಲ್ಲಿರುವ ಅದರಲ್ಲಿ ಅರ್ಧ ಎಕ್ರೆ ಜಮೀನನ್ನು ನೀಡಲು ನಿರ್ಧರಿಸಿದ್ದೇನೆ ಎಂದರು.
https://www.youtube.com/watch?v=8VMxyfP3zjM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv