ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿ ಬದಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದ್ದರಿಂದ ರಾಜ್ಯ ನಾಯಕರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರೆ, ಬಿಜೆಪಿ ನಾಯಕತ್ವವನ್ನು ಶಾಸಕ ಶ್ರೀರಾಮುಲು ಪಡೆದಿದ್ದಾರೆ. ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳಿಗಿಂತ ನಾಯಕರ ನಡುವಿನ ಬಿಗ್ ಫೈಟ್ ಅಂತಾನೇ ಕರೆಯಲಾಗುತ್ತಿದೆ.
ಇಬ್ಬರು ನಾಯಕರು ಚುನಾವಣೆಗಾಗಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಚುನಾವಣೆ ಚದುರಂಗದಾಟಕ್ಕೆ ಇಳಿದಿದ್ದಾರೆ. ಅಕ್ಟೋಬರ್ 21ರಿಂದ ಎರಡೂ ಪಕ್ಷಗಳ ವಾರ್ ಟೀಂ ಚುನಾವಣೆ ಮೈದನಾವನ್ನು ಪ್ರವೇಶಿಸಲಿದೆ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆಯೂ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದರು.
ಡಿಕೆಶಿ ವಾರ್ ಟೀಂ ಹೀಗಿದೆ:
* 200 ಜನರ ಶಾಶ್ವತ ವಾರ್ ಟೀಂನ್ನು ಡಿಕೆ ಶಿವಕುಮಾರ್ ರಚನೆ ಮಾಡಿದ್ದಾರೆ.
* ವಾರ್ ಟೀಂನಲ್ಲಿ ಕನಕಪುರ, ಬೆಂಗಳೂರು, ಮೈಸೂರಿನ ಭಾಗದವರನೇ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
* ಎಲೆಕ್ಷನ್ಗೆ 12 ದಿನ ಮೊದಲು ಕ್ಷೇತ್ರಗಳಲ್ಲಿ ಟೀಂ ವಾಸ್ತವ್ಯ ಹೂಡಲಿದೆ.
* ತಂಡವನ್ನು ಎರಡು ಗುಂಪುಗಳಾಗಿ ವಿಂಗಡನೆ
1. ವಿರೋಧಿಗಳ ತಂತ್ರಗಾರಿಕೆಯ ಮೇಲೆ ಕಣ್ಣಿಡಲು ಒಂದು ಗುಂಪು
2. ತಮ್ಮ ತಂತ್ರಗಾರಿಕೆಯನ್ನ ಅನುಷ್ಠಾನಗೊಳಿಸಲು ಇನ್ನೊಂದು ಗುಂಪು
ಶ್ರೀರಾಮುಲು ವಾರ್ ಟೀಂ ಹೀಗಿದೆ:
* 150 ಜನರು ಉಳ್ಳು ಟೀಂ ರಚನೆ
* ಈ ತಂಡ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದೆ.
* ತಂಡದಲ್ಲಿ ಆಂಧ್ರ ಮತ್ತು ರಾಯಲ ಸೀಮೆಯವರನ್ನು ನೇಮಕ ಮಾಡಲಾಗಿದೆ
* ಬೆಂಗಳೂರು, ರಾಯಚೂರು, ಗದಗ್ ಯುವಕರು ವಾರ್ ಟೀಂನಲ್ಲಿ ಸಕ್ರಿಯ
* ಪಕ್ಷ ವೀಕ್ ಇರುವ ಕ್ಷೇತ್ರಗಳಲ್ಲೇ ಹೆಚ್ಚು ಕೆಲಸ ಮಾಡುವ ತಂತ್ರಗಾರಿಕೆ
* ಎಲೆಕ್ಷನ್ಗೆ 12 ದಿನ ಮೊದಲು ಆ ಕ್ಷೇತ್ರಗಳಲ್ಲಿ ಬೀಡು ಬಿಡುವ ಟೀಂ
ಶಾಸಕ ಶ್ರೀರಾಮುಲು ಜಾತಿ ಅಸ್ತ್ರಕ್ಕೆ ಸಚಿವ ಡಿಕೆಶಿಯಿಂದ ಯಾರು ನಿರೀಕ್ಷೆ ಮಾಡದ ಅಣ್ಣಾಸ್ತ್ರ ಪ್ರಯೋಗ ಮಾಡುತ್ತಿದ್ದು, ನಾಯಕ ವರ್ಸಸ್ ಗೌಡ ಎಂದು ಬಿಂಬಿಸಿ ಸಿಂಪತಿ ಗಿಟ್ಟಿಸುವ ರಾಮುಲು ಯತ್ನಕ್ಕೆ `ಅಣ್ಣ’ ಪ್ರತ್ಯಸ್ತ್ರ ಮಾಡುತ್ತಿದ್ದಾರೆ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ.
ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.