ಬೆಂಗಳೂರು: ಇನ್ನು ಮುಂದೆ ವೈನ್ ಶಾಪ್ ನಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಎಲ್ಲ ಮದ್ಯಂದಂಗಡಿಯಲ್ಲೂ ಇನ್ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೈನ್ ಶಾಪ್ ನಲ್ಲಿ ಪಾರ್ಸೆಲ್ ನ ಜೊತೆ ಕುಡಿಯುವ ವ್ಯವಸ್ಥೆ ಮಾಡಲಾಗುವುದರಿಂದ ಅಕ್ರಮಕ್ಕೆ ಕಡಿವಾಣ ಹಾಕಲು ಅಬಕಾರಿ ಆಯುಕ್ತರು ಈ ನಿರ್ಧಾರವನ್ನು ಮಾಡಿದ್ದಾರೆ.
ಒಂದು ವೇಳೆ ಅಬಕಾರಿ ಇಲಾಖೆಯ ಆದೇಶವನ್ನು ಮೀರಿ ಸಿಸಿಟಿವಿ ಅಳವಡಿಸದಿದ್ದರೆ, ಇನ್ನು ಮುಂದೆ ಅಂತಹ ಶಾಪ್ ಗಳ ಲೈಸೆನ್ಸ್ ನವೀಕರಣ ಮಾಡಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ಅಬಕಾರಿ ಆಯುಕ್ತ ಮೌದ್ಗೀಲ್ ವಿರುದ್ಧ ಬಾರ್ ಮಾಲೀಕರ ಸಂಘ ಗರಂ ಆಗಿದೆ.
ಅಬಕಾರಿ ಇಲಾಖೆ ಸಿಕ್ಕಾಪಟ್ಟೆ ಕಠಿಣ ಕಾಯ್ದೆಗಳನ್ನು ತರುತ್ತಿದೆ. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಈ ರೀತಿ ಹೊಸ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದೆಂದರೆ ಈ ರೀತಿ ತೊಂದರೆಗಳನ್ನು ಕೊಡುವುದಲ್ಲ ಅಂತ ಬಾರ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.